Wednesday, November 21, 2012

ಭಾರತೀಯ ಪನೋರಮಾಕ್ಕೆ ಚಾಲನೆ


ಪಣಜಿ : ಗೋವೆಯ 43 ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ತೋಟದ ಸುಮಗಳು ಅರಳಿದವು.
ಐನಾಕ್ಸ್ ಮೂರನೇ ಚಿತ್ರಮಂದಿರದಲ್ಲಿ ಖ್ಯಾತ ನಟ ಓಂಪುರಿ, ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿದರು.
ಈ ವಿಭಾಗದಲ್ಲಿ ಹತ್ತುದಿನಗಳ ಕಾಲ ಕಥಾ ವಿಭಾಗದಲ್ಲಿ (ಫೀಚರ್) 20 ಮತ್ತು ಕಥೇತರ ವಿಭಾಗ (ನಾನ್ ಫೀಚರ್)ದಲ್ಲಿ 19 ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ (ನ್ಯಾಷನಲ್ ಫಿಲ್ಮ್ ಆರ್ಕೈವ್ಸ್)ನ ಚಾಲಕ ಶಕ್ತಿಯಾದ ಪಿ. ಕೆ. ನಾಯರ್ ಅವರ ಕುರಿತ ಸಾಕ್ಷ್ಯಚಿತ್ರ ಶಿವೇಂದ್ರ ಸಿಂಗ್ ದುಂಗರ್ ಪುರ್ ಅವರ ನಿರ್ದೇಶಿಸಿದ "ಸೆಲ್ಯುಲಾಯಿಡ್ ಮ್ಯಾನ್" ಚಿತ್ರದ ಮೂಲಕ ವೀಕ್ಷರಿಗೆ ತೆರೆದುಕೊಂಡಿತು.
ಕೂರ್ಮಾವತಾರ ಪ್ರದರ್ಶನ
ಭಾರತೀಯ ಪನೋರಮಾ ವಿಭಾಗ 1978 ರಲ್ಲಿ ಚಿತ್ರೋತ್ಸವಕ್ಕೆ ಸೇರ್ಪಡೆಗೊಂಡಿದ್ದು, ಈ ಬಾರಿ ಗಿರೀಶ್ ಕಾಸರವಳ್ಳಿಯವರ "ಕೂರ್ಮಾವತಾರ" ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೇ ಕಳೆದ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಮರಾಠಿಯ "ದೇವೂಳ್" ಮತ್ತು "ಬ್ಯಾರಿ" ಯಲ್ಲದೇ, ಜಾನು ಬರುವಾ ಅವರ 'ಬಂಧೋನ್' ಮತ್ತಿತರ 20 ಚಲನಚಿತ್ರಗಳು ತೆರೆ ಕಾಣುತ್ತಿವೆ.

ಕಲಾತ್ಮಕ ಚಿತ್ರಗಳನ್ನು ತಲುಪಿಸಲು ಪ್ರತ್ಯೇಕ ವ್ಯವಸ್ಥೆ ಅವಶ್ಯ : ಓಂಪುರಿ


ವರದಿ : ಅರವಿಂದ ನಾವಡ
ಪಣಜಿ : ಕಲಾತ್ಮಕ ಚಿತ್ರಗಳನ್ನು ಆಸಕ್ತ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸರಕಾರ ಕೈಗೊಳ್ಳಬೇಕು ಎಂದು ಹಿರಿಯ ನಟ ಓಂಪುರಿ ಆಗ್ರಹಿಸಿದ್ದಾರೆ.
ಗೋವೆಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಲಾತ್ಮಕ ಚಿತ್ರಗಳಿಗೆ ದೊರೆಯುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಆದರೆ, ಪ್ರತಿವರ್ಷ ಸ್ವತಂತ್ರ ಸಿನಿಮಾ ತಯಾರಕರು ರೂಪಿಸುವ ನೂರಾರು ಭಾರತೀಯ ಸಿನಿಮಾಗಳು ನೈಜ ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವು ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗುತ್ತಿವೆ' ಎಂದು ವಿಷಾದಿಸಿದರು.
"ಹೆಚ್ಚಿನ ಜನ ಸಮುದಾಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಪ್ರತ್ಯೇಕ ಚಾನೆಲ್ ನ್ನು ಆರಂಭಿಸುವ ಅಥವಾ ದೂರದರ್ಶನದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬೇಕು. ಸೃಜನಶೀಲಕೃತಿಗಳು ಸಂಬಂಧಪಟ್ಟ ಆಸಕ್ತ ಸಮುದಾಯಕ್ಕೆ ತಲುಪಿಸುವುದು ಈ ಹೊತ್ತಿನ ತುರ್ತು ಅಗತ್ಯದ ಕೆಲಸ' ಎಂದು ಹೇಳಿದರು.
"ಪ್ರಸ್ತುತ ಇರುವ ಚಲನಚಿತ್ರ ವಿತರಣಾ ವ್ಯವಸ್ಥೆಯನ್ನು ನಾನು ದೂರುತ್ತಿಲ್ಲ. ಅವರು ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡವರು. ಆದ್ದರಿಂದ, ಇಂಥ ಸ್ವತಂತ್ರ ಸಿನಿ ತಯಾರಕರು ರೂಪಿಸುವ ಸಿನಿಮಾಗಳನ್ನು ತಲುಪಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು' ಎಂದು ಹೇಳಿದರು.
ನೀತಿನಿರೂಪಕರು ನೋಡಲಿ
ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಸಮಸ್ಯೆಗಳನ್ನೇ ಪ್ರತಿಫಲಿಸುವ ರೀತಿಯಲ್ಲಿ ರೂಪಿತವಾಗುತ್ತಿದ್ದು, ನೀತಿ ನಿರೂಪಕರು ಇವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ಇತ್ತೀಚೆಗೆ "ಚಕ್ರವ್ಯೂಹ" ಸಿನಿಮಾದಲ್ಲಿ ನಟಿಸಿದೆ. ಅದು ನಕ್ಸಲ್ ಸಮಸ್ಯೆ ಕುರಿತಾದುದು. ಇಂದು ದೇಶದ ಹಲವೆಡೆ ಈ ಸಮಸ್ಯೆ ಉದ್ಭವಿಸಿದೆ. ಸಿನಿಮಾ ನಿರ್ಮಿಸುವವರು ಸಾಕಷ್ಟು ಅಧ್ಯಯನ ಕೈಗೊಂಡು ತೆರೆಯ ಮೇಲೆ ತಂದಿರುತ್ತಾರೆ. ಇಂಥ ಚಿತ್ರಗಳನ್ನು ವೀಕ್ಷಿಸಿದರೆ ಸಮಸ್ಯೆಯ ರೂಪ ಅರಿವಾದೀತು. ಸಮಸ್ಯೆಯ ನಿವಾರಣೆಗೆ ಪರಿಹಾರ ರೂಪಿಸಲು ನೆರವಾದೀತು' ಎಂದರು.
ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಉದಯಕುಮಾರ್ ವರ್ಮ, "12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಚಲನಚಿತ್ರ ಪರಂಪರೆಯನ್ನು ಬೆಳೆಸುವತ್ತ ಪೂರಕವಾಗುವಂತೆ 400 ಕೋಟಿ ರೂ. ಅಂದಾಜಿನ ರಾಷ್ಟ್ರೀಯ ಚಲನಚಿತ್ರ ಮಿಷನ್ ಪ್ರಾರಂಭಿಸಲಾಗುತ್ತಿದೆ. ಹಾಗೆಯೇ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರಸಾರಕ್ಕೂ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ಹಣದ ಸಹಾಯ ಒದಗಿಸುವುದು ಹಾಗೂ ಅವುಗಳ ಪ್ರಸಾರಕ್ಕೆ ದೂರದರ್ಶನದಲ್ಲಿ ಸೂಕ್ತ ಅವಕಾಶ ಕಲ್ಪಿಸಲು ಯೋಚಿಸಲಾಗುತ್ತಿದೆ.ಕಲಾತ್ಮಕ ಸಿನಿಮಾಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗವಿದ್ದರೆ ತಿಳಿಸಿ' ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಥಾ ಮತ್ತು ಕಥೇತರ ವಿಭಾಗದ ಜ್ಯೂರಿಗಳನ್ನು ಸನ್ಮಾನಿಸಲಾಯಿತು. ಶ್ಯಾಮ್ ಬೆನಗಲ್, ಪಿ. ಕೆ. ನಾಯರ್, ಬುದ್ಧದೇವ್ ದಾಸ್ ಗುಪ್ತ ಮತ್ತಿತರರು ಭಾಗವಹಿಸಿದ್ದರು.

Tuesday, November 20, 2012

ನವಿಲಿನ ಕುಣಿತಕ್ಕೆ ಮತ್ತಷ್ಟು ರಂಗು ಬೇಕಿತ್ತು


ವರದಿ : ಅರವಿಂದ ನಾವಡ
43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯನ್ನು ಕಂಡವರಿಗೆ ಅನ್ನಿಸಿದ್ದು ಇದೇ. ತೀರಾ ಸಪ್ಪೆ ಎನಿಸುವ ನಿರೂಪಣೆಯಿಂದ ಹಿಡಿದು, ಹನ್ನೊಂದು ದಿನದ ಸಂಭ್ರಮಕ್ಕೆ ಗೆಜ್ಜೆ ಕಟ್ಟುವ ಕೆಲಸವಾಗಲೇ ಇಲ್ಲ.
ಈ ಬಾರಿಯದು ಬರಿದೇ 43 ನೇ ಚಿತ್ರೋತ್ಸವವಾಗಿರಲಿಲ್ಲ. ಜತೆಗೆ ಭಾರತೀಯ ಸಿನಿಮಾದ ಶತಮಾನೋತ್ಸವ ವರ್ಷವೂ ಆಗಿತ್ತು. ಆದರೆ, ಇಡೀ ಉದ್ಘಾಟನಾ ಸಮಾರಂಭದಲ್ಲಿ ಆ ಉತ್ಸಾಹವೇ ಇರಲಿಲ್ಲ.
ಹಲವು ಕಾರಣಗಳಿಂದ ಬಹುಮುಖ್ಯ ಉತ್ಸವವಾಗಿರುವ ಇದರ ಉದ್ಘಾಟನೆ ಬಹಳಷ್ಟು ಸಂಭ್ರಮ ಮತ್ತು ಬದುಕಿನ ಸವಿನೆನಪಾಗಿ ಉಳಿದೀತೆಂದು ಬಂದವರಿಗೆ ಸಿಕ್ಕಿದ್ದು ಮತ್ತೊಂದು ಸಮಾರಂಭವಷ್ಟೇ.
ಔಪಚಾರಿಕ ಸಮಾರಂಭವನ್ನು ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಸರೋಜ್ ಖಾನ್ ಸಂಯೋಜಿಸಿದ ನೂರು ವರ್ಷ ಭಾರತೀಯ ಸಿನಿಮಾ ಕುರಿತ “ನೃತ್ಯರೂಪಕ” ಒಂದಷ್ಟು ಹೊತ್ತು ರಂಜಿಸಿದರೆ, ಕೈಲಾಸ್ ಖೇರ್ ಅವರ ಒಂದಿಷ್ಟು ಗೀತೆಗಳು ಖುಷಿ ನೀಡಿದವು.
‘ಕಾರ್ಯಕ್ರಮ ಇನ್ನಷ್ಟು ಗ್ರ್ಯಾಂಡ್ ಆಗಿರಬೇಕಿತ್ತು’ ಎಂದು ಹೇಳಿದವರು ಗೋವಾದ ಶ್ಯಾಂ ಸುಂದರ್. ಇಂಥ ಅಭಿಪ್ರಾಯ ಹಲವೆಡೆ ಕೇಳಿಬಂದಿತು.
ಟ್ರ್ಯಾಕ್
ಕೈಲಾಸ್ ಖೇರ್, ಸುಮಾರು ಏಳೆಂಟು ಹಾಡುಗಳನ್ನು ಹಾಡಿದರು. ಅದೂ ನೈಜಗಾನವೆನಿಸಿರಲಿಲ್ಲ. ಹಿಂದೆ ಟ್ರ್ಯಾಕ್ ಹಾಕಿಕೊಂಡು ಫಾಲೋ ಮಾಡಿದಂತಿತ್ತು.
ಎಕ್ಕ ರಾಜರಾಣಿ
ಇಡೀ ಚಲನಚಿತ್ರೋತ್ಸವದಲ್ಲಿ ಕನ್ನಡದ ಮಾತು ಕೇಳಿದ್ದೆಂದರೆ ಕೈಲಾಶ್ ಖೇರ್, "ಜಾಕಿ" ಚಿತ್ರದ "ಎಕ್ಕ ರಾಜರಾಣಿ" ಗೀತೆಯನ್ನು ಟ್ರ್ಯಾಕ್ ನಲ್ಲಿ ಹೇಳಿದ್ದು. ಇಷ್ಟು ಬಿಟ್ಟರೆ ಬೇರೇನೂ ಇರಲಿಲ್ಲ.
ಮೊದಲ ಚಿತ್ರಕ್ಕೆ ಫುಲ್ ರಶ್
ಲೈಫ್ ಆಫ್ ಫೈ ಚಿತ್ರಕ್ಕೆ ಸಿನಿಮಾ ಮಂದಿರ ಹೌಸ್ ಫುಲ್. ಕಲಾ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದ್ದ ಉತ್ಸವದ ಮೊದಲ ಚಿತ್ರಕ್ಕೆ ಸಿನಿಮಾ ಮಂದಿರ ಭರ್ತಿಯಾಗಿ ಎರಡೂ ಕಡೆ ಸಾಲಾಗಿ ನಿಂತುಕೊಂಡೇ ಇಡೀ ಸಿನಿಮಾ ವೀಕ್ಷಿಸಿದವರು ಹಲವರು.
ಉದ್ಘಾಟನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಿತ್ರಮಂದಿರದತ್ತ ಎಲ್ಲರೂ ದೌಡಾಯಿಸಿದ್ದರಿಂದ ಸ್ವಲ್ಪ ನೂಕು ನುಗ್ಗಲಿನ ಅನುಭವವಾಯಿತು. ಆದರೂ ಗಂಭೀರ ಸಮಸ್ಯೆಯಾಗಲಿಲ್ಲ. ಥ್ರೀಡಿ ಚಲನಚಿತ್ರವಾಗಿದ್ದರಿಂದ ಹಲವರು ಇಷ್ಟ ಪಟ್ಟರು.

ಸಿನಿಮಾ ನನ್ನಿಷ್ಟದ ಮಾಧ್ಯಮ : ಜಾನುಸಿ


ಪಣಜಿ : ಬಹುನಿರೀಕ್ಷಿತ ನವಿಲು ಕುಣಿತ ಆರಂಭಗೊಂಡಿದೆ !
ಹನ್ನೊಂದುದಿನ ಇನ್ನೇನಿದ್ದರೂ ನವಿಲಿನ ಕುಣಿತವಷ್ಟೇ. ಕಣ್ತುಂಬಿಕೊಳ್ಳುವ ಉತ್ಸಾಹವಿರಬೇಕು ಅಷ್ಟೇ.
ಗೋವೆಯ ರಾಜಧಾನಿ ಪಣಜಿಯ ಕಲಾ ಅಕಾಡೆಮಿ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಂಗಳವಾರ ಸಂಜೆ ಖ್ಯಾತ ನಟ ಅಕ್ಷಯ್ ಕುಮಾರ್ 43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
"ನನ್ನ ಬದುಕಿಗೆ ಹೆಚ್ಚು ಖುಷಿಯನ್ನು ತುಂಬಿರುವುದು ಈ ಸಿನಿಮಾ. ಚಿಕ್ಕಂದಿನಿಂದಲೂ ಮೋಹವಾಗಿಯೇ ಉಳಿದಿದ್ದ ಸಿನಿಮಾ ಮಾಧ್ಯಮ ಇಂದಿಗೂ ಆ ಮೋಹಕತೆಯನ್ನು ಉಳಿಸಿಕೊಂಡಿದೆ, ಇಲ್ಲಿವರೆಗೂ ತಂದು ನಿಲ್ಲಿಸಿರುವ ಈ ಮಾಧ್ಯಮವನ್ನು ಮರೆಯಲಾಗದು’ ಎಂದವರು ಅಕ್ಷಯ್ ಕುಮಾರ್.
ಹೆಸರಾಂತ ಪೊಲಿಶ್ ಚಿತ್ರ ನಿರ್ದೇಶಕ ಕ್ರಿಸ್ಟೋಫ್ ಜಾನುಸಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ, “ಕೇಂದ್ರ ಸರಕಾರ ಸಿನಿಮಾ ಮಾಧ್ಯಮವನ್ನು ಹೆಚ್ಚು ಜನಪ್ರಿಯಗೊಳಿಸಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಸಿನಿಮಾ ಪಾರಂಪರಿಕ ಮಿಷನ್ ಸ್ಥಾಪಿಸುವ ಇರಾದೆಯನ್ನು ಹೊಂದಿದ್ದು, ಸದ್ಯವೇ ಜಾರಿಗೊಳ್ಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ, “ಅತ್ಯಂತ ಪ್ರಭಾವಶಾಲಿಯಾಧ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಜನರನ್ನು ರಚನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಸಿನಿಮಾ ನಿರ್ದೇಶಕರನ್ನು ಮನವಿ ಮಾಡಿದರು.
ಜೀವಮಾನ ಸಾಧನೆಗೆ ಪ್ರಶಸ್ತಿ ಪುರಸ್ಕರಿಸಿದ ಕ್ರಿಸ್ಟೋಫ್ ಜಾನುಸಿ, “ ಗೌರವ ಇನ್ನಷ್ಟು ಸಿನಿಮಾಗಳನ್ನು ಮಾಡುವ ಹುರುಪು ತುಂಬಿದೆ,. ಚಲಿಸುವ ಚಿತ್ರಗಳು ಮತ್ತು ಧ್ವನಿಯನ್ನು ಬಳಸಿಕೊಂಡು ನಮ್ಮ ಜೀವನದ ಅನುಭವವನ್ನು ಕಥೆಯಾಗಿ ಹೇಳಲು ಇರುವ  ಮಾಧ್ಯಮದಿಂದ ದೂರವುಳಿಯಲು ನನ್ನಿಂದಾಗದು. 21 ನೇ ಶತಮಾನವನ್ನು ಏಷ್ಯಾದ ಶತಮಾನವೆಂದು ಹೇಳಲಾಗುತ್ತಿದೆ. ಆದರೆ, ನನ್ನ ಅನಿಸಿಕೆಯಲ್ಲಿ ಅದು ಭಾರತದ ಶತಮಾನ’ಎಂದರು.
ಗೋವಾವನ್ನು ಅತ್ಯುತ್ತಮ ಚಿತ್ರನಗರಿಯನ್ನಾಗಿಸುವ ಹೊಣೆ ಎಂಟು ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದೆ. ಈ ವರ್ಷ ಆ ಅಭಿದಾನ ದೊರೆತಿದೆ. ಆದರೆ ನಮ್ಮ ಕೆಲಸ ಇಲ್ಲಿಗೆ ನಿಲ್ಲದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಮತ್ತಷ್ಟು ವೈಭವೋಪೇತಗೊಳಿಸುವ ಕೆಲಸ ಇಂದಿನಿಂದ ಆರಂಭಗೊಳ್ಳಲಿದೆ ಎಂದವರು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್.
ಇದೇ ಸಂದರ್ಭದಲ್ಲಿ ಸಿನಿಮಾ ತೀರ್ಪುಗಾರರಿಗೆ ಸನ್ಮಾನಿಸಲಾಯಿತು. ಅಸ್ಸಾಮಿ ಚಿತ್ರ ನಿರ್ದೇಶಕ ಜಾನು ಬರುವಾ ಅವರನ್ನು ಗೌರವಿಸಲಾಯಿತು. ಉತ್ಸವದ ಆರಂಭದ ಚಿತ್ರ “ಲೈಫ್ ಆಫ್ ಫೈ” ನಲ್ಲಿ ನಟಿಸಿರುವ ತಬು ಮತ್ತು ಇರ್ಫಾನ್ ಖಾನ್ ರನ್ನೂ ಸನ್ಮಾನಿಸಲಾಯಿತು. ಗೋವಾದ ರಾಜ್ಯಪಾಲರಾದ ವಾಂಚೂ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಉದಯ ಕುಮಾರ್ ವರ್ಮ, ಗೋವಾದ ಕಾರ್ಯದರ್ಶಿ ವಿಜಯನ್, ನಟಿ ಕಾಜಲ್ ಅಗರ್ವಾಲ್ ಉಪಸ್ಥಿತರಿದ್ದರು.

Saturday, November 17, 2012

ಗೋವಾ ಚಲನಚಿತ್ರೋತ್ಸವದಲ್ಲಿ ಕೂರ್ಮಾವತಾರ


ಗೋವಾದಲ್ಲಿ ನವೆಂಬರ್ 20 ರಿಂದ 30 ರವರೆಗೆ ನಡೆಯಲಿರುವ 43 ನೇ ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

“ಭಾರತೀಯ ಪನೋರಮಾ’ ವಿಭಾಗದಲ್ಲಿ ಒಟ್ಟು ೨೦ ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಕನ್ನಡದ ಪೈಕಿ ಇದೊಂದೇ ಚಲನಚಿತ್ರ ಆಯ್ಕೆಯಾಗಿದೆ. ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಿತ್ರ ರಾಜ್ಯದಲ್ಲಿ ಇನ್ನೂ ತೆರೆ ಕಾಣಬೇಕಿದೆ.

ಉಳಿದಂತೆ “ಬಂದೋನ್’ (ಅಸ್ಸಾಮಿ-ಜಾನುಬರುವಾ), ಶಬ್ದೊ (ಬಂಗಾಳಿ-ಕೌಶಿಕ್ ಗಂಗೂಲಿ), ಚಿತ್ರಾಂಗದಾ(ಬಂಗಾಳಿ-ಋತುಪರ್ಣ ಘೋಷ್), ಏಳಾರ್ ಚಾರ್ ಅಧ್ಯಾಯ (ಬಂಗಾಳಿ-ಬಪ್ಪದಿತ್ಯ ಬಂಡೋಪಾಧ್ಯಾಯ), ದೇಶ್ವಾ(ಭೋಜ್‌ಪುರಿ-ನಿತಿನ್ ಚಂದ್ರ), ಬ್ಯಾರಿ(ಬ್ಯಾರಿ-ಸುವೀರನ್), ಲೆಸನ್ಸ್ ಇನ್ ಫಾರ್ಗೆಟಿಂಗ್ (ಇಂಗ್ಲಿಷ್-ಉನ್ನಿ ವಿಜಯನ್), ಗಂಗೂಬಾಯಿ ಹಿಂದಿ ಪಾರ್ಟಲಿ (ಮರಾಠಿ-ಪ್ರಿಯಾ ಕೃಷ್ಣಸ್ವಾಮಿ), ಐ.ಡಿ ಹಿಂದಿ (ಇಂಗ್ಲಿಷ್-ಕಮಲ್ ಕೆ.ಎಂ), ದಿಗಂತ್(ಕೊಂಕಣಿ-ಧ್ಯಾನೇಶ್ ಮೋಘೆ), ಆಕಾಂಕ್ಷಿತೆ ನಿರಂ(ಮಲಯಾಳಂ-ಡಾ. ಬಿಜು), ಭೂಮಿಯುದೆ ಅವಕಾಸಿಕಲ್ (ಮಲಯಾಳಂ-ಟಿ.ವಿ.ಚಂದ್ರನ್), ಓಝಿಮುರಿ(ಮಲಯಾಳಂ-ಮಧುಪಾಲ್), ಇಥ್ರಮಾತ್ರಂ(ಮಲಯಾಳಂ-ಕೆ.ಗೋಪಿನಾಥನ್), ಮಂಜಾದಿಕುರು(ಮಲಯಾಳಂ-ಅಂಜಲಿ ಮೆನನ್), ಸಂಹಿತಾ (ಮರಾಠಿ-ಸುಮಿತ್ರಾ ಭಾವೆ ಮತ್ತು ಸುನಿಲ್ ಸುಖ್ತಂಕರ್), ಡಿಯೋಲ್(ಮರಾಠಿ-ಉಮೇಶ್ ವಿನಾಯಕ್ ಕುಲಕರ್ಣಿ), ಅನ್ಹೆ ಘೋರೆ ದಾ ದಾನ್(ಪಂಚಾಬಿ-ಗುರ‍್ವಿಂದರ್ ಸಿಂಗ್), ವಗಾಯೀ ಸೋಡಾ(ತಮಿಳು-ಎ.ಸರ‍್ಕುಣಮ್) ಇವು ಪ್ರದರ್ಶನಗೊಳ್ಳಲಿರುವ ಉಳಿದ ಚಲನಚಿತ್ರಗಳು. ಇದಲ್ಲದೇ, ಚಲನಚಿತ್ರೇತರ ವಿಭಾಗದಲ್ಲಿ ಸುಮಾರು೧೯ ವಿವಿಧ ಭಾರತೀಯ ಭಾಷೆಯ ದೃಶ್ಯಕೃತಿಗಳು ಪ್ರದರ್ಶನಗೊಳ್ಳಲಿವೆ.

ಉತ್ಸವವನ್ನು ನ. ೨೦ ರಂದು ಖ್ಯಾತನಟ ಅಕ್ಷಯ್ ಕುಮಾರ್ ಉದ್ಘಾಟಿಸುವರು. ಗೋವಾದ ರಾಜಧಾನಿ ಪಣಜಿಯಲ್ಲಿರುವ ಕಲಾ ಅಕಾಡೆಮಿಯ ದರಾಯ ಕಲಾಸಂಗಮ್ ಮತ್ತು ದೀನನಾಥ್ ಮಂಗೇಶ್ಕರ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.
ಒಟ್ಟು ಹನ್ನೊಂದು ದಿನಗಳ ಉತ್ಸವದಲ್ಲಿ ೨೦೦ ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲಿನ ಸ್ಪರ್ಧೆಯಲ್ಲದೇ, ಜಾಗತಿಕ ಸಿನಿಮಾ, ವಿದೇಶಿ ನಿರ್ದೇಶಕರ ಹಲವು ಅತ್ಯುತ್ತಮ ಸಿನಿಮಾಗಳು (ವಾಚಿಕೆ ಮಾದರಿ), ನೆನಪು, ನಿರ್ದಿಷ್ಟ ದೇಶಗಳ ಮೇಲೆ ಬೆಳಕು ಚೆಲ್ಲುವಂಥ ಸಿನಿಮಾಗಳು, ಭಾರತೀಯ ಪನೋರಮಾ, ಭಾರತೀಯ ನಿರ್ದೇಶಕರ ವಾಚಿಕೆ ಮತ್ತು ಸ್ಮರಣೆ, ತಾಂತ್ರಿಕ ಕಾರ‍್ಯಾಗಾರಗಳು ನಡೆಯಲಿವೆ.
ಭಾರತೀಯ ಸಿನಿಮಾ ನೂರು ವರ್ಷದ ನೆನಪಿಗೆ “ಶತಮಾನೋತ್ಸವ ಪ್ರಶಸ್ತಿ’ ಪ್ರಶಸ್ತಿ (ಬೆಳ್ಳಿ ಪಾರಿತೋಷಕ, ಹತ್ತು ಲಕ್ಷ ರೂ. ನಗದು)ಯನ್ನು ನೀಡಲಾಗುತ್ತಿದೆ.

Saturday, September 3, 2011

ಸಿನಿಮಾ ಒಂದು ಕಲೆಯೇ?

ನಮ್ಮ ಕನ್ನಡದ ಬ್ಲಾಗ್ ನಲ್ಲಿ ಲಭ್ಯವಿರುವ ಲೇಖನಗಳನ್ನು ಇಲ್ಲೂ ಇನ್ನು ಮುಂದೆ ಪ್ರಕಟಗೊಳ್ಳಲಿವೆ. ಬ್ಲಾಗ್ ಸ್ಪಾಟ್ ನ ಓದುಗರಿಗೂ ಲಭ್ಯವಾಗಲೆಂಬ ದೃಷ್ಟಿಯಿಂದ ಈ ಕ್ರಮ. ದಯವಿಟ್ಟು ಸಹಕರಿಸಿ.

ಸಂ

ಡಾ. ಕೆ. ಶಿವರಾಮಕಾರಂತರು ಎಲ್ಲ ಕ್ಷೇತ್ರಗಳ ಬಗ್ಗೆಯೂ ತಮ್ಮ ನೋಟವನ್ನು ಹರಿಸಿದ್ದಾರೆ. ಅವರ ಆಸಕ್ತಿಯೇ ದಿಗಲು ಹುಟ್ಟಿಸುವಂಥದ್ದು. ಸಿನಿಮಾ ಕುರಿತು ಅವರು ಬರೆದ ಒಂದು ಲೇಖನ ನಮ್ಮನ್ನು ಹಲವು ದಿಕ್ಕುಗಳೆಡೆಗೆ ಆಲೋಚನಾಮುಖಿಯಾಗಲು ಪ್ರಚೋದಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ “ಕಲಾ ಪ್ರಬಂಧಗಳು” ಕುರಿತಾದ ಕೃತಿಯಿಂದ ಆಯ್ದದ್ದು ಇಲ್ಲಿ ಪ್ರಕಟಿಸಲಾಗುತ್ತಿದೆ. ಎಲ್ಲರೂ ಓದಿ ಅಭಿಪ್ರಾಯಿಸಿ.

ನಾವು ಬಯಸಲಿ ಬಯಸದಿರಲಿ, ಚಲನಚಿತ್ರ ಪ್ರದರ್ಶನ ಇಂದು ಜಗತ್ತಿನ ಉದ್ದಕ್ಕೂ ಪ್ರಚಾರಕ್ಕೆ ಬಂದಿದೆ. ಪೂರ್ವದಿಂದಲೂ ನಮ್ಮ ಸಂಸ್ಕೃತಿ ಯೊಡನೆ ಬೆರೆತು ಬಂದ ಕೆಲವು ಲಲಿತಕಲೆ ಗಳಷ್ಟೇ, ಎಷ್ಟೋ ಕಡೆ ಅವಕ್ಕಿಂತ ಅಡಕವಾದ ವ್ಯಾಮೋಹವನ್ನು ಅದು ನಮ್ಮಲ್ಲಿ ಉಂಟು ಮಾಡಿದೆ. ನಗರವಾಸಿಗಳಿಗೆ, ಚಲನಚಿತ್ರಗಳನ್ನು ಆಗಾಗ ನೋಡುವ ಚಟ ನಿತ್ಯಜೀವನದ ಒಂದು ಅಂಗವಾಗಿ ಪರಿಣಮಿಸಿದೆ. ನಿತ್ಯವೂ ವರ್ತಮಾನ ಪತ್ರಗಳನ್ನು ಓದುವ ಚಾಳಿಯಂತೆ, ಚಲನಚಿತ್ರ ಪ್ರೇಕ್ಷಣೆ ಒಂದು ಚಾಳಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಹಳ್ಳಿಗಳಿಗೂ ಇದು ಪಸರಿಸಿದೆ. ರಷ್ಯಾ ದೇಶದಲ್ಲಿ ಇದರ ಪ್ರಚಾರ ಕಂಡುಬಂದಷ್ಟು ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಊಟ ಶಾರೀರಕ ಆಹಾರವಾಗಿರುವಂತೆ ಹಲವರ ಪಾಲಿಗೆ ಇದು ಮಾನಸಿಕ ಆಹಾರವಾಗಿದೆ. ಕಾವ್ಯ, ಕಾದಂಬರಿಗಳಷ್ಟೇ ಪ್ರಾಮುಖ್ಯ ಸ್ಥಾನವನ್ನು ಇದು ವಹಿಸಿದೆ. ಹಲವೊಂದು ಕಾವ್ಯ ಕಾದಂಬರಿಗಳಲ್ಲಿ ಅಯೋಗ್ಯ ವಿಷಯಗಳಿವೆ ಎಂಬ ಕಾರಣದಿಂದ, ಕಾವ್ಯ ವರ್ಗವನ್ನೇ ಹೇಗೆ ದೂರಲು ಬರಲಾರದೋ, ಹಾಗೆಯೇ ಇಂದು ಕಂಡುಬರುವ ಅಯೋಗ್ಯ, ಅಸಭ್ಯ ಚಿತ್ರಗಳ ದೆಸೆಯಿಂದಲೇ, ಅವುಗಳನ್ನು ಹಳಿಯಲು ಬರಲಾರದು. ವೇಶ್ಯೆಯರ ಕೈಯಲ್ಲಿ ಗಾನನರ್ತನಗಳು ಕಾಮಸಾಧನೆಗಾಗಿ ಉಪಯೋಗಿಸಲ್ಪಡುತ್ತವೆಂದು ನಾವು ಗಾನ ನರ್ತನಗಳನ್ನೇ ದೂರಬಹುದೇ ! ಕಲೆಗಳು ಮನುಷ್ಯರ ಜೀವನಕ್ಕೆ ಅತಿ ಅವಶ್ಯ. ಶ್ರೇಷ್ಠ ಸಂಸ್ಕೃತಿಯು ಶ್ರೇಷ್ಠ ಕಲೆಗಳಿಲ್ಲದೆ ಬದುಕದು.

ಹೀಗೆಂದಾಗ- ಈ ಮಾತುಗಳು ಗಾನ, ನರ್ತನಗಳಂತಹ ಲಲಿತಕಲೆಗಳಿಗೆ ಅನ್ವಯಿಸಬಲ್ಲುವೇ ಹೊರತು, ಚಲನಚಿತ್ರದಂತಹ ಮಾನಸಿಕ ಮದ್ಯಪಾನಕ್ಕೆ ಅನ್ವಯಿಸಲಾರದೆಂಬ ಉತ್ತರ ಬರ ಬಹುದು. ಇತ್ತ, ಈ ಚಿತ್ರಗಳ ಕಡೆಗೆ ಹಲವರು ತೋರುತ್ತಿರುವ ಆಸಕ್ತಿ-ಹೆಂಡದ ಕಡೆಗೆ ಮದ್ಯಪಾನಿ ತೋರುವ ಹಂಬಲದಂತಿದೆ- ಎಂಬ ಮಾತನ್ನೂ ಹೇಳುವಂತಿಲ್ಲ. ಆ ಒಂದೇ ಕಾರಣದಿಂದ ಚಲನಚಿತ್ರವನ್ನು ತಳ್ಳಿಬಿಡುವಲ್ಲಿ, ಅದೇ ರೀತಿಯ ಮೋಹಕ ಶಕ್ತಿಯುಳ್ಳ, ಯಾವತ್ತು ಲಲಿತಕಲೆಗಳನ್ನೂ ತಳ್ಳಬೇಕಾದೀತು. ಅದು ತೀರ ನವೀನವೆಂಬುದರಿಂದಲೂ ನಾವು ಅದನ್ನು ಅಲ್ಲಗಳೆಯುವುದೂ ಸರಿಯಲ್ಲ. ಆದಿವಾಸಿಗಳ ಜೀವನದಲ್ಲಿ ಮೊದಲು ತಲೆದೋರಿದ ಕಲೆ ಎಂಬುದೇ ನರ್ತನ; ಹಿಂದೆ ಅದೂ ನವೀನ ಎನಿಸಿತ್ತು. ಮುಂದೆ ಗಾಯನ ಕಲೆ ಬಂದಿತು. ಆಗ, ಅದೂ ನವೀನವೆನಿಸಿತ್ತು. ತರುವಾಯ ಶಿಲ್ಪ, ಚಿತ್ರಕಲೆಗಳು ಬಂದುವು. ಆಗ, ಅವೂ ನವೀನವೆನಿಸಿದುವು. ಮಾನವನ ಸಂಸ್ಕೃತಿ ಇನ್ನೂ ಮುಂದೆ ಹೋದಂತೆ, ವಾಸ್ತುಶಿಲ್ಪ ಬಂದಿತು. ಅದೂ, ಆ ಕಾಲಕ್ಕೆ ನವೀನವೇ. ಆದರೆ, ಈ ಕಾಲಕ್ಕೆ ಅವೆಲ್ಲ ಪ್ರಾಚೀನವಾದುವು. ಆದುದರಿಂದ, ಚಲನಚಿತ್ರವು ಈಗ ನಮಗೆ ನವೀನವಾಗಿದೆ ಎಂಬುದರಿಂದ ಅದನ್ನು ಹಳಿಯದೆ, ಅದರಲ್ಲಿ ಕಲಾ ಲಕ್ಷಣಗಳಿವೆಯೇ- ಎಂಬುದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ.

ಮೊಟ್ಟಮೊದಲು ಕಲೆಯೆಂದರೇನೆಂದು ವಿಚಾರ ಮಾಡುವ. ತನಗುಂಟಾಗುವ ಭಾವ ವಿಶೇಷಗಳನ್ನು ಒಂದು ವಾಹಕ ((medium) ದ ಮೂಲಕ ಪರಿರಿಗುಂಟಾಗುವಂತೆ ಮಾಡುವ ಸಾಧನೆಯೇ ಕಲೆ. ಪೆಟ್ಟು ತಿಂದಾಗ ಮಗು ಅಳುವುದು; ಅದನ್ನು ಕಂಡು ಇತರರಿಗೂ ದುಃಖವುಂಟಾಗುವುದು. ಇದೊಂದು ಕಲೆಯೇ ? ಅಲ್ಲ. ಕಾರಣ, ನೋವಾದವನು ತನಗುಂಟಾಗುವ ವ್ಯಥೆಯನ್ನು ಅಳುವಿನ ಮೂಲಕ ಪ್ರಕಟಗೊಳಿಸುವುದು ಹುಟ್ಟು ಗುಣ. ಆದರೆ, ಕಲೆಯು ನಮ್ಮ ಜೀವನದ ಹುಟ್ಟು ಗುಣ ಇಲ್ಲವೆ ಸ್ವಭಾವವಲ್ಲ, ದುಃಖ ಬಂದಾಗ ಅಳುವುದು, ಹರುಷವಾದಾಗ ನಗುವುದು, ಸಿಟ್ಟು ಬಂದಾಗ ಉದ್ರೇಕಗೊಳ್ಳುವುದು-ಈ ಕ್ರಿಯೆಗಳು ಯಥಾವತ್ತಾಗಿ ಪರರನ್ನು ದುಃಖ, ಹರುಷ, ಕೋಪದಲ್ಲಿ ಮುಳುಗಿಸಬಹುದಾದರೂ, ಅವನ್ನು ಕಲೆಯೆನ್ನಲು ಸಾಧ್ಯವಿಲ್ಲ. ಕಲೆಯಲ್ಲೂ ಕೆಟ್ಟ ಗುಣವಿರಬಹುದು. ಆದರೆ, ಅವೆಲ್ಲ ನಮ್ಮ ಸ್ವಾಭಾವಿಕ ಗುಣಗಳಲ್ಲ, ಅದು ಯಾವುದೇ ಸ್ವಭಾವ ಗುಣದ ತಾದ್ರೂಪಿಕ(Realistic)ಅನುಕರಣೆಯೂ ಅಲ್ಲ. ಇನ್ನೊಬ್ಬ ಅತ್ತಂತೆ ಅನುಕರಿಸುವುದು ಕಲೆಯಲ್ಲ. ಕಲೆ ಕೆಲವು ವಿಷಯಗಳಲ್ಲಿ, ಇದ್ದಕ್ಕಿದ್ದಂತೆ ಅನುಕರಿಸುವ ಸ್ವಭಾವದ್ದಾಗಿ ಕಾಣಿಸಿದರೂ, ಕೆಲವೊಂದು ವಿಷಯಗಳಲ್ಲಿ ಅದು ಅಮೂರ್ತ ರೂಪದ್ದು. ಅಮೂರ್ತ ವಿಚಾರ ಊಹಾ ರಾಜ್ಯದ ಉತ್ಪತ್ತಿ; ಮೂರ್ತಿಮಂತವಾಗಿ ಕಾಣಸಿಗದ ವಸ್ತು. ಇವೆರಡನ್ನು ಕೂಡಿ ಉಂಟಾಗುವ ಸೃಷ್ಟಿಯೇ ಕಲೆ. ನಾವು ಯಾವ ಸೃಷ್ಟಿಯನ್ನು ಮಾಡಬೇಕಾದರೂ, ನಮ್ಮ ಇದಿರು ಮೂರ್ತ ವಸ್ತುಗಳು ಬೇಕೆ ಬೇಕು. ಹಾಗೆಯೇ, ಕಣ್ಣಿಗೆ ಕಾಣಿಸುವ ಕ್ರಿಯೆಗಳೂ ಬೇಕು. ಕೇವಲ ಇಷ್ಟನ್ನೇ ಉಪಯೋಗಿಸಿಕೊಂಡರೆ ಅದು ಸೃಷ್ಟಿ-ಕಲೆಯೆನಿಸಲಾರದು. ‘ಒಂದು ವಸ್ತು-ಹೊರಗಿನ ಆಕಾರ, ಅಳತೆ ಮೊದಲಾದವುಗಳ ದೃಷ್ಟಿಯಿಂದ ಎಷ್ಟೇ ಯಥಾವತ್ತಾಗಿದ್ದರೂ, ಅದಕ್ಕೆ ಕಾರಣವಾದ ಮೂಲವಸ್ತು ಕೊಡಬಲ್ಲ ಭಾವಾನಂದಗಳನ್ನು ಕೊಡಲಾರದು. ಒಬ್ಬನ ರೂಪಬಿಂಬ ಆ ಮನುಷ್ಯನ ಸ್ಥಾನವನ್ನು ಎಂದೂ ನಿರ್ವಹಿಸದು. (Paul Rotha P. 40)

ನಾವೀಗ ಗಾನಸೃಷ್ಟಿಯ ಒಂದು ಚಿಕ್ಕ ಪ್ರಬಂಧ(Composition) ವನ್ನು ಕುರಿತು ಯೋಚಿಸುವ. ಸಪ್ತಸ್ವರಗಳಿಂದ ಅದರ ರಚನೆ ಉಂಟಾಯಿತು. ಈ ಸಪ್ತಸ್ವರಗಳು ನಿಸರ್ಗದಲ್ಲಿ ಕೇಳಸಿಗುವ ಕೆಲವು ಸ್ವರಗಳಂತೆಯೇ ಇವೆ. ಸ್ವರಗಳೇ ಆ ಹಾಡಿನ ವಸ್ತು. ಆದರೆ, ಅದು ಹೊರಗೆ ನಿಸರ್ಗದಲ್ಲಿ ಆಗಾಗ ಕೇಳಿಸುವ ಸ್ವರ ಸಮೂಹವಲ್ಲ. ಸ್ವರಗಳನ್ನು ಕೂಡಿಕೊಂಡ ಅದರ ಒಂದೊಂದು ತುಣುಕೂ ನಿಸರ್ಗದಲ್ಲಿ ಕೇಳಿಬರುವ ಸ್ವರಕುಂಜವಾಗಿರಬಹುದು. ಉದಾ: ಆ ಹಾಡಿನ ಒಂದು ತುಣುಕು ಕೋಗಿಲೆಯ ಕೂಗಿನಂತೆ ಕೇಳಿಸಬಹುದು. ಇನ್ನಿತರ ತುಣುಕುಗಳು ಬೇರೆ, ಬೇರೆ ಪ್ರಾಣಿಗಳು ಹೊರಡಿಸುವ ಧ್ವನಿಗಳಂತಿರಬಹುದು. ಅವುಗಳಿಂದ ಹಾಡಿನ ಸೃಷ್ಟಿ ಅಮೂರ್ತ ವಾದೊಂದು ಭಾವನೆಯನ್ನು ಪ್ರೇರಿಸಬಲ್ಲ ಗುಣವನ್ನು ಪಡೆಯಲು ಬಂದೀತು.

ಈಗ, ಒಂದು ಚಿತ್ರದ ಉದಾಹರಣೆಯನ್ನು ಎತ್ತಿಕೊಳ್ಳುವ. ಆ ಚಿತ್ರದ ಬಣ್ಣಗಳು ನಿಸರ್ಗದಲ್ಲಿ ಕಾಣಸಿಗುವವುಗಳೇ. ಅಲ್ಲಿ- ಚಿತ್ರದಲ್ಲಿ ಬರೆದ ಮನುಷ್ಯ, ಪಶು, ನದಿ ಮೊದಲಾದ ವಸ್ತುಗಳ ಅಂಗೋಪಾಂಗಗಳು ಬಹುಮಟ್ಟಿಗೆ ತಾದ್ರೂಪಿಕವಾಗಿರಬಹುದು. ಆದರೆ, ಆ ಚಿತ್ರ ನಮ್ಮಲ್ಲಿ ಪ್ರೇರಿಸುವ ಭಾವ ತೀರ ನವೀನವಾಗಿದ್ದು, ನಿಸರ್ಗದಲ್ಲಿ ಕಾಣಸಿಗದ ಅಮೂರ್ತರೂಪದ್ದೂ ಆಗಿರಲು ಶಕ್ಯವಿದೆ. ಇದೇ ರೀತಿ, ನರ್ತನದ ಅಂಗಭಾಗಗಳನ್ನು ಕುರಿತು ಆಡಬಹುದು.

ಹೀಗೆ, ಮೂರ್ತ ಇಲ್ಲವೆ ದೃಗ್ಗೋಚರ (Realistic)ಒಡವೆಗಳ ಸಹಾಯದಿಂದ ಭಾವಪ್ರೇರಕ ಅಮೂರ್ತ ಕಲ್ಪನೆಯನ್ನು ಸೃಷ್ಟಿಸುವುದೇ ಕಲೆಯ ಗುರಿ. ಇಂಥ ಸೃಷ್ಟಿಗಳಲ್ಲಿ ತಾದ್ರೂಪಿಕತೆ ಮತ್ತು ಅಮೂರ್ತತೆಗಳು ಯಾವ ಪ್ರಮಾಣದಲ್ಲಿ ಸೇರಬಹುದು ಎಂಬುದು ಆಯಾಯ ಕಲೆಗಳ ಮಾಧ್ಯಮವನ್ನು ಹೊಂದಿಕೊಂಡಿದೆ. ಚಾರ್ಲ್ಸ ಮೇರಿಯಟ್ ಎಂಬವನು ಈ ವಿಷಯದಲ್ಲಿ ಹೀಗೆ ಹೇಳಿದ್ದಾನೆ: ‘ಕಲೆಯ ಸ್ವರೂಪ ಅದರ ಮಾಧ್ಯಮವನ್ನು ಹೊಂದಿದೆ. ನಿಸರ್ಗದ ತಾದ್ರೂಪಿಕ ಅನುಕರಣೆಗೂ, ಅಮೂರ್ತ ಸ್ವರೂಪಕ್ಕೂ ಇರುವ ಮೇಳವೇ ಕಲೆ. ಇದರಲ್ಲಿ ಅಮೂರ್ತತೆಯೆಷ್ಟಿರಬೇಕು, ತಾದ್ರೂಪ್ಯ ಎಷ್ಟಿರಬೇಕು ಎಂಬುದು ನಾವು ಬಳಸುವ ಮಾಧ್ಯಮವನ್ನು ಹೊಂದಿದೆ ಈಗ ನರ್ತನವನ್ನು ಉದಾಹರಣೆ ಗಾಗಿ ಪರಿಶೀಲಿಸುವ. ಇದರಲ್ಲಿ ನೈಸರ್ಗಿಕ ಅನುಕರಣೆ ಕಡಿಮೆ. ನರ್ತನ ಕಾಲದಲ್ಲಿ ತೋರಿಸುವ ಹಾವಗಳೂ (Gestures), ಕುಣಿತದ ತೆರತೆರನ ಅಂಗವಿನ್ಯಾಸಗಳೂ ನಿಸರ್ಗದಲ್ಲಿ ಕಂಡುಬರುವುದಿಲ್ಲ. ಅದರಲ್ಲಿ ಹೆಚ್ಚಿನ ಅಮೂರ್ತತೆಯಿದೆ. ಶಿಲ್ಪ, ಚಿತ್ರಕಲೆಗಳಲ್ಲಿ ಅನುಕರಣೆಯ ಅಂಶ ಅಧಿಕ ಪ್ರಮಾಣದಲ್ಲಿದೆ.

ಇದೇ ತೆರನ ಯೋಗ್ಯತೆ ಚಲನಚಿತ್ರದಲ್ಲಿ ಇದೆಯೇ- ಎಂದು ವಿಚಾರ ಮಾಡಿದಲ್ಲಿ, ಅಹುದೆಂದು ನಮಗೆ ಹೊಳೆದೀತು. ಈಗ ನಮ್ಮಲ್ಲಿಗೆ ಬರುವ ಚಿತ್ರಗಳಲ್ಲಿ ಹೆಚ್ಚಿನವು ತಾದ್ರೂಪಿಕವಾಗಿದ್ದರೂ, ನಿಜವಾದ ಚಲನಚಿತ್ರ ಇದಕ್ಕಿಂತ ಹೆಚ್ಚಿನ ಅಮೂರ್ತತೆ ತೋರಿಸುವ ನವಸೃಷ್ಟಿಯನ್ನು ರಚಿಸಲು ಸಾಧ್ಯವಿದೆ. ಅದು ಕೇವಲ ವಾಸ್ತವಿಕವಾಗಿರುವ ಬದಲು, ಸೃಜನಶೀಲತೆಯಿಂದ ಸತ್ಯಾತ್ಮಿಕವಾಗಿರಬಹುದು. ‘ಅದಕ್ಕಿರುವ ಪ್ರಬಲ ಕ್ರಿಯಾತ್ಮಕ ಶಕ್ತಿಯೂ, ಭಾವ ಪ್ರೇರಣೆಯ ಬಲವೂ ಇನ್ಯಾವ ಕಲೆಗೂ ಇಲ್ಲ ಎನ್ನಬಹುದು. (Paul Rotha 1 bid p. 45)

ಚಾರ್ಲಿ ಚಾಪ್ಲಿನ್‌ನೆನ್ನುವಂತೆ- ‘ನಮ್ಮ ಊಹಾಶಕ್ತಿಯನ್ನೂ, ತರಂಗಿತತೆ (rythm) ಮತ್ತು ಬಣ್ಣಗಳಿಗೆ ಇಂದ್ರಿಯಗಳನ್ನು ಉದ್ರೇಕಗೊಳಿಸುವ ಶಕ್ತಿ ಚಲನಚಿತ್ರಗಳಿಗಿದೆ. ಇದರಿಂದಾಗಿ, ಚಲನಚಿತ್ರ ಉದ್ಯಮ ಅಷ್ಟೊಂದು ಭವ್ಯ ಮತ್ತು ಆಕರ್ಷಕ ಸ್ಥಾನವನ್ನು ಗಳಿಸಿದೆ. ಈ ಅದ್ಭುತ ಶಕ್ತಿಯ ರಾಕ್ಷಸನನ್ನು ನಾವು ಸಾಕುತ್ತಿದ್ದೇವೆ. ಆದರೆ, ಅದನ್ನು ತೆಗೆದುಕೊಂಡು ಏನು ಮಾಡಬೇಕೆಂಬ ಅರಿವು ನಮಗೆ ಇದೆಯೇ?

ಯಾವುದೇ ಕಲೆಯು ಸೃಷ್ಟಿಯಾಗಲು, ಕಲಾವಿದನ ಭಾವಸೃಷ್ಟಿಗೆ ಅನುಕೂಲವಾದ ಮಾಧ್ಯಮ ಬೇಕೇ ಬೇಕು. ನಮ್ಮ ವಿಚಾರಶಕ್ತಿಯನ್ನು ಎಚ್ಚರಗೊಳಿಸಿ, ಭಾವನೆಗಳನ್ನು ಉದ್ರೇಕಗೊಳಿಸುವ ಶಕ್ತಿ ಆ ಮಾಧ್ಯಮಕ್ಕೆ ಇರಬೇಕಷ್ಟೆ. ಚಲನಚಿತ್ರದಲ್ಲಿ ಅಂಥ ಶಕ್ತಿ ಇದೆಯೇ ? ನಿಜಕ್ಕೂ ಧಾರಾಳವಾಗಿದೆ. ಇಲ್ಲಿ, ಅದರ ಮಾಧ್ಯಮ- ಚಿತ್ರಪಟಲದ (film) ತುಣುಕುಗಳು. ಅವುಗಳ ಮೇಲೆ ಸ್ಥಿರ ಮತ್ತು ಚರವಸ್ತುಗಳ ತಾದ್ರೂಪಿಕ ಬಿಂಬಗಳಿರುತ್ತವೆ. ಇವನ್ನು ಜೋಡಿಸಿ, ಭಾವಸೃಷ್ಟಿಗೆ ಬೇಕಾದ ವಸ್ತುಗಳನ್ನು ಸುಲಭದಲ್ಲಿ ನಿರ್ಮಿಸಬಹುದು. ರಷ್ಯಾ ದೇಶದ ಕುಶಲೆವ್ ಎಂಬ ಚಲನಚಿತ್ರ ನಿರ್ದೇಶಕ ಹೀಗೆನ್ನುತ್ತಾನೆ – ‘ಪ್ರತಿ ಕಲೆಯೂ, ಮೂಲತಃ ಒಂದಲ್ಲ ಒಂದು ವಸ್ತು (material) ವಿನಿಂದ ಕೂಡಿದ್ದು, ಆ ವಸ್ತುಗಳ ಸ್ವಭಾವಕ್ಕೆ ಅನುಗುಣವಾಗಿ ಅವನ್ನು ಜೋಡಿಸುವುದರಿಂದ ಅವಕ್ಕೆ ಶಕ್ತಿ ಬರುತ್ತದೆ. ಚಲನಚಿತ್ರದಲ್ಲಿ ಬೆಳಕು ನಿರ್ಮಿಸಿಕೊಡುವ ಬಿಂಬಗಳನ್ನು ಹೊತ್ತಿರುವ ಪಟಲವೇ ಅಲ್ಲಿನ ವಸ್ತು; ಪಟಲದ ಬೇರೆ ಬೇರೆ ತುಣುಕುಗಳನ್ನು ಉದ್ದೇಶಕ್ಕೆ ಸರಿಯಾಗಿ ಜೋಡಿಸಿ ತೋರಿಸುವ ಕೆಲಸವೇ ಅದರ ಸಂಯೋಜನೆ.

ಆದರೆ, ಪಾಲ್‌ರೋತನೆನ್ನುವಂತೆ ಈ ಚಲನಚಿತ್ರ ನಿರ್ಮಾಣಕ್ಕೆ ಬೇಕಾಗುವಷ್ಟು ವಿವಿಧ ಶಾಸ್ತ್ರಗಳ ಪರಿಚಯ ಇನ್ಯಾವ ಭಾವವಾಹಕಕ್ಕೂ ಬೇಕಾಗುವುದಿಲ್ಲ. ಅದೇಕೆಂದು ಮುಂದೆ ತಿಳಿಯುವಿರಿ- ‘ಚಲನಚಿತ್ರ ಮೂಲತಃ ನಿಸರ್ಗದಿಂದ ಪಡೆಯುವ ವಿವಿಧ ರೀತಿಯ ಬಿಂಬಗಳ ಸಮ್ಮೇಳನದಿಂದ ಪಡೆಯುವ ಒಂದು ಸೃಷ್ಟಿ. (ಈ ಕೆಲಸಕ್ಕಾಗಿ ಉಪಯೋಗಿಸುವ ವಸ್ತುಗಳು ನೈಸರ್ಗಿಕವಾಗಿರಬಹುದು.) ಇಲ್ಲಿನ ಚಿತ್ರಬಿಂಬಗಳೆಲ್ಲವೂ ಬೆಳಕಿನ ಉಪಯೋಗದಿಂದಲೂ, ಚಲನೆಯ ದೃಷ್ಟಿಯಿಂದಲೂ ಪಡೆಯುವ ದೃಶ್ಯಬಿಂಬಗಳ ಮಾಲೆ ಕೇವಲ ಮನಃಶಾಸ್ತ್ರದ ದೃಷ್ಟಿಯಿಂದ ಅಳೆಯುವಂಥದಲ್ಲ. ಕಾಲ್ಪನಿಕ ಬಿಂಬಗಳನ್ನು ಸೃಷ್ಟಿಸಿಯೂ, ಚಲನಚಿತ್ರ ನಿರ್ಮಿಸಲು ಬಂದೀತು.

ಇನ್ನು, ನಾವು ಈ ಹೊಸ ಮಾಧ್ಯಮದ ಚಿತ್ರಪಟಲದ ಲಕ್ಷಣಗಳನ್ನು ಪರಿಶೀಲಿ ಸುವ. ಅದಕ್ಕಿಂತ ಮೊದಲು, ನಮಗೆ ಈಗಾಗಲೇ ಪರಿಚಿತವೆನಿಸುವ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ನರ್ತನ ಮೊದಲಾದುವುಗಳಲ್ಲಿನ ವಾಹಕಗಳು ಯಾವ ತೆರನಲ್ಲಿ ಭಾವಸೃಷ್ಟಿಗೆ ಒದಗುತ್ತವೆ-ಎಂಬುದನ್ನು ಪರಿಶೀಲಿಸುವ, ಇವುಗಳಲ್ಲಿ ಚಿತ್ರಕಲೆ, ಶಿಲ್ಪ, ವಾಸ್ತುಗಳು ಸ್ಥಿತ(static) ರೂಪದವು. ಅವು ದೀರ್ಘಕಾಲ ಉಳಿಯಬಲ್ಲವು. ಸಂಗೀತ, ನರ್ತನ, ನಾಟಕಗಳು ಕಾಲಗತಿ ಹೊಂದಿದವು. ಆದರೆ, ಅವುಗಳ ಜೀವನ ತಾತ್ಕಾಲಿಕ. ಒಂದು ಸ್ಥಿತ ಕಲೆಯಲ್ಲಿ ಅಮೂರ್ತ ವಿಷಯಕ್ಕೆ ರೂಪವನ್ನು ಕೊಡಬಲ್ಲ ವಸ್ತುಗಳು: ರೇಖಾ ಪ್ರವಾಹಗಳು, ಸಾಮರಸ್ಯದಿಂದ ಬರೆಯುವ ಇಲ್ಲವೆ ಇರಿಸಲ್ಪಡುವ ಆಕಾರಗಳು ಮತ್ತು ಚಿತ್ರಗತ ಬಿಂಬಗಳು ಸೂಚಿಸುವ ಚಲನೆಗಳು. ಉದಾ: ಚಿತ್ರದಲ್ಲಿ ಕಾಣಿಸುವ ಸಮತಳ (horizontal) ರೇಖೆಗಳು ಶಾಂತಿ, ವಿಶ್ರಾಂತಿ, ಮೊದಲಾದ ಭಾವಗಳನ್ನು ಪ್ರೇರಿಸುತ್ತವೆ. ನೆಟ್ಟಗೆ ನಿಂತ ಲಂಬ (vertical) ರೇಖೆಗಳು- ಗಾಂಭೀರ್ಯ, ಬಲ, ಮೊದಲಾದ ಲಕ್ಷಣ ಸೂಚಿಸುತ್ತವೆ. ಅಲ್ಲಿನ ವಕ್ರರೇಖೆ(curves) ಗಳು ಲಾಲಿತ್ಯ,ಕೋಮಲತೆ,ಆನಂದ ಮೊದಲಾದ ಲಕ್ಷಣಗಳನ್ನು ಪ್ರೇರಿಸುತ್ತವೆ. ಹಾಗೆಯೇ, ಒಂದು ಚಿತ್ರದಲ್ಲಿ ಛಾಯೆಯೇ ಅಧಿಕವಾಗಿದ್ದು, ಬೆಳಗಿದ ಭಾಗ ಕಡಿಮೆಯಾಗಿದ್ದರೆ ಅದು ದುಃಖ ಸೂಚಿಸೀತು; ತೇಜವೇ ಅಧಿಕವಾಗಿದ್ದರೆ ಹರ್ಷ ಕಾಣಿಸೀತು.

ಇತ್ತ, ಅಲ್ಪ ಕಾಲ ಉಳಿಯುವ ಸಂಗೀತ, ನರ್ತನಗಳಲ್ಲಿ- ತಾಳ, ಲಯ, ಗತಿ, ಸಾಮರಸ್ಯ ಮೊದಲಾದ ಲಕ್ಷಣಗಳು ನಮ್ಮಲ್ಲಿ ಆನಂದ, ದುಃಖ, ಶಾಂತಿ, ತಲ್ಲಣ ಮೊದಲಾದಭಾವಗಳನ್ನು ಮೂಡಿಸಬಲ್ಲುವು.
ಈ ಎರಡು ವರ್ಗದ ಕಲೆಗಳಿಗಿರುವ ಶಕ್ತಿಗಳು ಚಲನಚಿತ್ರವೊಂದರಲ್ಲಿಯೇ ಸೇರುತ್ತವೆ. ಪ್ರತಿಯೊಂದು ಚಿತ್ರವೂ ತನ್ನ ರೇಖಾವಿನ್ಯಾಸದಿಂದ ಭಾವವನ್ನು ಪ್ರೇರಿಸೀತು. ಅದರಲ್ಲಿನ ಛಾಯಾತೇಜಗಳ ಸಮ್ಮೇಳನ ಅದೇ ಕೆಲಸವನ್ನು ಮಾಡಬಲ್ಲುದು. ಹಾಗೆಯೇ, ನರ್ತನ, ತಾಲ, ಗತಿಗಳ ಸಹಾಯದಿಂದ ಭಾವೋದ್ರೇಕ ಕೊಡಬಲ್ಲುದು. ಚಿತ್ರಗತ ವ್ಯಕ್ತಿ ಇಲ್ಲವೆ ವಸ್ತುಗಳ ವಿಭಿನ್ನ ರೀತಿಯ ಚಲನೆಗಳೂ, ಕೆಮರಾ ಒಡವೆಗಳ ಕಡೆಗೆ ಇಲ್ಲವೆ ಅವುಗಳಿಂದ ದೂರ ಸರಿಯುವ ಚಲನೆಗಳೂ, ವಸ್ತುಗಳನ್ನು ವಿಭಿನ್ನ ಕೋನಗಳಿಂದ ಕಾಣುವಾಗ ಉಂಟಾಗುವ ಸ್ಪಂದನೆಗಳೂ ಭಾವಗಳನ್ನು ಹುಟ್ಟಿಸಬಲ್ಲುವು. ಇದಲ್ಲದೆ, ಚಿತ್ರಪಟಲವು ಚಲಿಸುವುದರಿಂದ ಅದರ ಶಕ್ತಿ ಬೇರೆಯೇ ಇದೆ ! ಸ್ಥಿರ ವಸ್ತುಗಳ ಚಿತ್ರಗಳನ್ನು ಸಹ, ಯೋಗ್ಯ ರೀತಿ ಯಿಂದ ಲಯಬದ್ಧವಾಗಿ, ಒಂದರ ಬಳಿಕಿನ್ನೊಂದನ್ನು ಪ್ರದರ್ಶಿಸುವುದರಿಂದ ಭಾವಗಳನ್ನು ಪ್ರೇರಿಸಬಹುದು. (ಅಂಥ ಕೊನೆಯ ಕ್ರಮದಿಂದ ಭಾವಪ್ರೇರಣೆಯುಂಟಾಗುವ ಬಗೆಯನ್ನು ಕುರಿತು ಮುಂದೆ ಇನ್ನಷ್ಟು ತಿಳಿಸುತ್ತೇವೆ) ಇಷ್ಟೆಲ್ಲ ಅದ್ಭುತ ಸಾಮರ್ಥ್ಯವುಳ್ಳ ಕಲಾ ಮಾಧ್ಯಮವನ್ನು ಕುರಿತು ಚಾರ್ಲಿ ಚೆಪಲೀನನು ‘ಅದ್ಭುತ ರಾಕ್ಷಸ ಎಂದು ಕರೆದುದರಲ್ಲಿ ಆಶ್ಚರ್ಯವಿಲ್ಲ.

ಆದರೆ, ಈ ಅಪಾರ ಶಕ್ತಿಯ ರಹಸ್ಯ ಅರಿತವರು ಬೇಕು. ಅದರಿಂದ, ನಮ್ಮ ಜನ ಜೀವನದಲ್ಲಿ ಅದ್ಭುತ ಕ್ರಾಂತಿಯನ್ನೇ ಉಂಟು ಮಾಡಲು ಸಾಧ್ಯವಿದೆ. ಕಲೆಗಳಿಗಿರುವ ಹಿರಿಮೆ- ಎಂಬುದು ಅಂಥ ಸಾಮರ್ಥ್ಯವನ್ನು ಹೊಂದಿದೆ. ಆದುದರಿಂದ, ಕಲೆಯ ಪ್ರವಾಹವನ್ನು ತಡೆಯುವುದು ಕಷ್ಟ. ನಿತ್ಯದ ನಮ್ಮ ಎಚ್ಚರವನ್ನೇ ಅದು ನಮ್ಮಿಂದ ತಪ್ಪಿಸಿ, ನಮ್ಮಲ್ಲಿ ಹೊಸ ಭಾವನೆಗಳನ್ನು ಪ್ರೇರಿಸುವ ಶಕ್ತಿ ಅದಕ್ಕಿರುವುದರಿಂದ, ಇಂದಿನ ದಿನಗಳಲ್ಲಿ ಅದರ ಸಾಧನೆಗಳನ್ನು ಕುರಿತು ಅಲಕ್ಷ್ಯ ತೋರಿಸುವಂತಿಲ್ಲ.

Thursday, February 4, 2010

The quiet gentleman

Muralidhara khajane

K.S. Ashwath, among Kannada cinema's real actors, is no more. Sadly, this "star-driven" industry made no exceptions to even a phenomenal actor like Ashwath. He, who lent a new dimension to every role that he played, Ashwath was truly someone who expanded the horizon of the supporting actor. How is it possible for any Kannada film lover to forget the role of Chamaiah Meshtru in the pathbreaking film, "Nagarahavu". It's more than a mere coincidence that both Chamaiah Meshtru and Ramachari, played by Vishnuvardhan, passed away within a gap of less than three weeks. In fact, close friends have said how Ashwath was heart broken when he heard Vishnuvardhan was no more. Struck by the character and its portrayal, director Shantharam made "Karnana Sampattu" in which he reimaged Chamaiah Meshtru.

Ashwath entered Kannada films as a hero in "Streerathna" (1954), but could not retain his position as hero for long. That, however, did not deter him from continuing his career in cinema. He opted for strong supporting roles and created a niche for himself. "Our film makers should realise that films are much more than the glorified heroism," he would often say underlining the role supporting actors had in the making of a good film.

Karaganahalli Subbaraya Ashwathanarayana, originally from Holenarsipura taluk was born in Mysore in 1925. His formal education came to an end at the intermediate level when he joined the freedom struggle in 1942. Two years later, he got a job as a Food Inspector. He later became a steno in the Deputy Commissioner's office. He spent ten years in Government service.

His acting career began, when he started participating in radio plays produced by Mysore All India Radio. His friendship with theatre people took him on stage too. He etched major roles in the plays of A.N. Murthy Rao, Parvathavani and others. Film director K. Subrahmanyam, who saw him in one of these plays, selected him for a role in "Streerathna". Unmindful of the family's stiff opposition, Ashwath gave up his government job and took the plunge. Of course, he was not flooded with offers. As fate would have it, his third child died of liver problem, just when he had made this difficult choice. With a heavy heart, Ashwath left for Madras, the seat of cinema in those days in search of work. There after, on his occasional visits to Karnataka he toured the districts with the drama troupes of his friends.

In 1960, he played the role of a Swamiji in "Kittur Chennamma" with B. Saroja Devi in the lead role. The same year he played Narada in the hit "Bhakta Prahlada". His role in "Gali Gopura" gave him an edge and helped shape his career as an artiste of immense calibre. Ashwath then got a role in the English film "Seven Wonders of the World' and even became the first Kannada actor in a colour film.

Several of his films became big hits. He won three national awards and several awards for being the best supporting actor. "I put everything into my roles and acting gave me a certain satisfaction. But if the roles I essayed didn't look natural, I would shrink in embarrassment," he would often say. Film critics who have studied Ashwath and his enormous contribution to Kannada cinema, were of the opinion that even when the main narrative of a film revolved around false social details, it was Ashwath who created a sub-text of authenticity, genuineness.

Among his best roles are "Nagarahavu", "Nandadeepa", "Gejjepuje", "Sharapanjara" "Jenugudu", "Nyayave Devaru" and "Belli Moda". Ashwath is the only one in "Sharapanjara" who sympathises with his daughter (Kalpana), who suffers from hallucinations. Similarly he is the only person (Chamayya Meshtru) to support and defend the angry young man Ramacharai (Vishnuvardhan), while society accuses and blames him. In "Gejje Puje" the anguish of protagonist gets soothing touch only because of Ashwath. A strict disciplinarian, his was the sane voice in most films that dealt with serious social issues.

After acting in nearly 300 films, he stopped acting a few years ago, because he was not happy the way Kannada industry was functioning. It was due to the insistence of his dear friend and fellow actor, Rajkumar that he changed his decision. He acted with the Kannada icon in "Shabdavedi". Regardless of his age, he acted in "Bhoopathi" and "Sirivantha" recently.

Ashwath who was suffering from Vetebro Basilar inefficiency, a disorder caused by high blood pressure, was going through difficult times. He was finding it hard to meet medical expenses. Despite his hardships, not once did he ask for help. However, Government, cine artists and social organisations came forward to help him.

The gentleman Ashwath who kept a low profile always, is no more. In him, we have not only lost a great actor but it is also the end of an era and a value system. "Lifestyle is changing, generation gap is widening. We have to gracefully accept the change," he would quietly say.

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms