Thursday, December 20, 2012

ಬೆಂಗಳೂರು ಚಿತ್ರೋತ್ಸವ : ಮಾಸ್ಟರ್ಸ್ ನಿಂದ ಹಿಡಿದು ರೆಟ್ರಾಸ್ಪೆಕ್ಟಿವ್ ವರೆಗೆ


ಸಾಂಗತ್ಯ ಬೆಂಗಳೂರು ಚಿತ್ರೋತ್ಸವದ ಸರಣಿಯಲ್ಲಿ ಪ್ರಕಟಿಸುತ್ತಿರುವ ಲೇಖನವಿದು. ಇಂದಿನಿಂದ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ  ಆರಂಭ. ಈ ಹಿನ್ನೆಲೆಯಲ್ಲಿ ಸಿನಿಮಾಸಕ್ತರಿಗೆ ಅನುಕೂಲವಾಗುವಂತೆ ಮಾಸ್ಟರ್ಸ್ ಸಿನಿಮಾ ಮತ್ತು ಪುನರಾವಲೋಕನ ವಿಭಾಗದಡಿ ಪ್ರದರ್ಶಿತವಾಗುತ್ತಿರುವ ಚಿತ್ರಗಳ ನಿರ್ದೇಶಕರು, ನಟರ ಪರಿಚಯ ಕುರಿತ ಲೇಖನವಿದು. 
ಹೆನ್ರಿ ಜಾರ್ಜಸ್ ಕ್ಲೌಟ್(1907-1977)
ಹೆನ್ರಿ ಜಾರ್ಜಸ್ ಕ್ಲೌಟ್ ಫ್ರೆಂಚ್ ಚಿತ್ರ ನಿರ್ದೇಶಕ. ಚಿತ್ರ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಪ್ರಯತ್ನಗಳನ್ನು ಮಾಡಿದ ಹೆನ್ರಿ, ಬಹಳ ಪ್ರಸಿದ್ದವಾದುದು ತನ್ನ ಥ್ರಿಲ್ಲರ್ ಸಿನಿಮಾಗಳಿಂದ. ದಿ ವೇಜಸ್ ಆಫ್ ಫಿಯರ್ ಮತ್ತು ಲೆಸ್ ಡೈಬೊಲಿಕಾಸ್ ಚಿತ್ರಗಳಂತೂ ಹೆನ್ರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿತು. ಸಿನಿಮಾಸಕ್ತರಿಂದ ಮತ್ತು ವಿಮರ್ಶಕರಿಂದ ಪ್ರಶಂಸೆಗೊಳಗಾದ ಇವೆರಡೂ ಚಿತ್ರಗಳು 1950 ರ ದಶಕದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿವೆ.
ಹೆನ್ರಿ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ಖ್ಯಾತ ಕಲಾವಿದ ಪಿಕಾಸೊ ಕುರಿತಂತೆ ದಿ ಮಿಸ್ಟರಿ ಆಫ್ ಪಿಕಾಸೊ ಸಾಕ್ಷ್ಯಚಿತ್ರ ಇವರದ್ದೇ.
henri georges clouzt
henri georges clouzt
ಮೊದಲು ಹೆನ್ರಿ ಒಬ್ಬ ಸಿನಿಮಾಸಕ್ತ. ಬಳಿಕ ಲೇಖಕನಾಗಿ ಭವಿಷ್ಯವನ್ನು ಕಂಡುಕೊಳ್ಳುವ ಇಚ್ಛೆಯಿಂದ ಪ್ಯಾರಿಸ್ ಗೆ ಹೋದರು. ಹೀಗೆ ಕೆಲ ವರ್ಷಗಳ ನಂತರ, ಬರ್ಲಿನ್ ನಲ್ಲಿ ಚಿತ್ರ ನಿರ್ಮಾಪಕನೊಬ್ಬ ಅವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಆಗಲೂ ಮಾಡಿದ್ದು, ಜರ್ಮನ್ ಸಿನಿಮಾಗಳ ಫ್ರೆಂಚ್ ಅವತರಣಿಕೆಗೆ ಚಿತ್ರ ಸಾಹಿತ್ಯ ಸಿದ್ಧಪಡಿಸಬೇಕಿತ್ತು. ಈ ಮಧ್ಯೆ ಆತ ಫ್ರಾನ್ಸ್ ಗೆ ವಾಪಸಾದರು. ಆದರೆ, ಪರಿಸ್ಥಿತಿ ಕೆಟ್ಟದಾಗಿತ್ತು. ಕ್ಷಯದಿಂದ ಬಳಲಿ ಹಾಸಿಗೆ ಹಿಡಿದಿದ್ದ ಹೆನ್ರಿ, ಕೆಲ ಕಾಲದ ನಂತರ ಚೇತರಿಸಿಕೊಂಡರು. ಆ ತರುವಾಯ ಜರ್ಮನ್ ಮಾಲೀಕತ್ವದ ಕಂಪನಿಯೊಂದರಲ್ಲಿ ಚಿತ್ರಕಥಾ ರಚನಾಕಾರರಾಗಿ ಸೇರಿಕೊಂಡರು. ಹೆನ್ರಿ ಬರೆದು ನಿರ್ದೇಶಿಸಿದ ಚಿತ್ರಗಳು ಜನಪ್ರಿಯವಾಗತೊಡಗಿದವು. ಈ ಮಧ್ಯೆ ಅವರ ಎರಡನೇ ಚಿತ್ರ ಲೀ ಕರ್ಬೋ ಸಾಕಷ್ಟು ವಿವಾದಕ್ಕೀಡಾಯಿತು. ಈ ಹಿನ್ನೆಲೆಯಲ್ಲಿ ಫ್ರೆಂಚ್ ಸರಕಾರ 1947 ರವರೆಗೂ ಅವರಿಗೆ ಸಿನಿಮಾ ಮಾಡದಂತೆ ನಿಷೇಧ ಹಾಕಿತು.
ನಂತರ ನಿಷೇಧವನ್ನು ವಾಪಸು ಪಡೆದ ನಂತರ, ಹೆನ್ರಿ ಕ್ವಾಯ್ ದೆಸ್ ಆರ‍್ಫೆವ್ರಸ್ ನಂತಹ ಚಿತ್ರಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಂಡರು. ಇಷ್ಟೊಂದು ಕ್ರಿಯಾಶೀಲವಾಗಿದ್ದ ಹೆನ್ರಿ ನಿಷ್ಕ್ರಿಯರಂತಾಗಿದ್ದು ತಮ್ಮ ಪತ್ನಿಯನ್ನು ಕಳೆದುಕೊಂಡ ಬಳಿಕ. ಪತ್ನಿಯ ಅಗಲಿಕೆ ಅವರನ್ನು ಒಂದೆಡೆ ಸಂಕಷ್ಟಕ್ಕೆ ದೂಡಿದರೆ, ಮತ್ತೊಂದೆಡೆ ಫ್ರೆಂಚ್ ಹೊಸ ಅಲೆಯವರಿಂದ ಟೀಕೆಗೆ ಒಳಗಾಗಬೇಕಾಯಿತು. ಹಾಗಾಗಿ ಕೆಲವು ಸಾಕ್ಷ್ಯಚಿತ್ರಗಳಿಗೆ ಸೀಮಿತಗೊಂಡರು.

Monday, December 17, 2012

ಕುರಸೋವಾರ ಚಿತ್ರಗಳು


ಕುರಸೋವಾರ ಬಗ್ಗೆ ವಿನಾಯಕ ಪಂಡಿತರು ಬರೆದ ಹಳೆಯ ಲೇಖನವಿದು. 5 ನೇ ಬೆಂಗಳೂರು ಚಿತ್ರೋತ್ಸವದಲ್ಲಿ ಕುರಸೋವಾರ ಚಿತ್ರಗಳು ಮಾಸ್ಟರ್ಸ್ ಆಫ್ ಸಿನಿಮಾ ವಿಭಾಗದಲ್ಲಿ ಪ್ರದರ್ಶಿಸುತ್ತಿರುವುದರಿಂದ ಸಿನಿಮಾಸಕ್ತರಿಗೆ ಮತ್ತೆ ಓದಲು ಲಭ್ಯವಾಗಲೆಂದು ಈ ಲೇಖನ ಪ್ರಕಟಿಸುತ್ತಿದ್ದೇವೆ.

ಕುರೋಸಾವರ ಏಳು ಸಮುರಾಯಿಗಳು (seven samurai), ಇಕುರು, ರಹಸ್ಯ ಕೋಟೆ (the hidden fortress), ಆತ್ಮ ರಕ್ಷಕ (yojimbo), ಸಂಜೂರೋ, ರಕ್ತಸಿಂಛಿತ ಸಿಂಹಾಸನ (the throne of blood), ರಾಶೋಮನ್, ಮತ್ತು ಮಾದದೆಯೋ ಚಿತ್ರಗಳನ್ನು ನೋಡಿ ಪಡೆದ ಆನಂದವೇ ಈ ಲೇಖನಕ್ಕೆ ಕಾರಣ. ಇಲ್ಲಿ ಕುರೋಸಾವರ ಚಿತ್ರಗಳ ವಿಮರ್ಶೆಯಿಲ್ಲ. ಅವರ ಚಿತ್ರಗಳನ್ನು ನೋಡಿದ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವಿದೆ.ಇವುಗಳಲ್ಲಿ ರಹಸ್ಯ ಕೋಟೆ, ಯೊಜಿಂಬೋ, ಮತ್ತು ಸಂಜೂರೊ ಒಂದೇ ಗುಂಪಿನ ಚಿತ್ರಗಳೆನ್ನಬಹುದು. ಇವುಗಳ ಬರುವನ್ನು ಸಾರುತ್ತ ಬಂದಂತಿದೆ, ಏಳು ಸಮುರಾಯಿಗಳು.
a-1
ಉಳಿದ ಚಿತ್ರಗಳಲ್ಲಿ ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ ಒಂದೇ ಗುಂಪಿನವು. ಇಕುರು ಮತ್ತು ಮಾದದೆಯೋ ಸ್ವತಂತ್ರವಾಗಿ ಮೂಡಿ ಬಂದ ಚಿತ್ರಗಳು. ಇಕುರು ಯುರೋಪಿನ existentialismನಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು. ಜಪಾನಿನ ತಮ್ಮ ಸಮಕಾಲೀನ ಪರಿಸ್ಥಿತಿ ಮತ್ತು ಸಂಸ್ಕೃತಿಯೊಂದಿಗೆ ಅನುಕಂಪ ಬೆಳೆದ ಮೇಲಿನ ಹೇಳಿಕೆ, ಮಾದದೆಯೊ. ಮನುಷ್ಯರ ಅಸ್ತಿತ್ವದ, ನಡುವಳಿಕೆಯ ಹಲವು ಆಯಾಮಗಳ ಬಗ್ಗೆ ಕುರೋಸಾವರಿಗಿರುವ ಕುತೂಹಲವೇ ಈ ಎಲ್ಲ ಚಿತ್ರಗಳನ್ನು ಒಂದುಗೂಡಿಸಿದೆ.
kurosawa 1
ನಾನು ಮೇಲೆ ಮಾಡಿರುವ ವರ್ಗೀಕರಣವನ್ನು ವಿವರಿಸುವ ಅಗತ್ಯವಿದೆ. ಕುರೋಸಾವರ ಚಿತ್ರಗಳಲ್ಲಿ ನಮ್ಮ ಮತ್ತು ಕುರೋಸಾವರ ಕುತೂಹಲವನ್ನು ಕೆರಳಿಸುವವರು ಸಮುರಾಯಿಗಳು - ಅಂದರೆ ಗುತ್ತಿಗೆಯ ಯೋಧರು (ಇವರನ್ನು ರಾಜರಿಂದ ಹಿಡಿದು ಹಳ್ಳಿಯ ರೈತರು ಕೂಡ ಉಪಯೋಗಿಸಿಕೊಳ್ಳುತ್ತಿದ್ದರು). ಅವರ ಹಾವ ಭಾವಗಳನ್ನು ಕುರೋಸಾವ ಪೂರ್ತಿಯಾಗಿ ಕಲ್ಪಿಸಿಕೊಳ್ಳಬಲ್ಲರು. ಅವರ ಸಾಮಾಜಿಕ ಬದುಕು ಮತ್ತು ಧೋರಣೆಯ ಬಗ್ಗೂ ಕುರೊಸಾವಾರಿಗೆ ಸಹಾನುಭೂತಿಯಿದೆ. ಒಂದು ರೀತಿಯಲ್ಲಿ ಅವರು ಅವರ ಪ್ರೀತಿಪಾತ್ರರು. ಆದರೂ, ಅವರಿಗೆ ಅವರ ಅಂತರಂಗವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಆಗಿಲ್ಲ. ಸಮುರಾಯಿಗಳು ಈ ಆತ್ಮೀಯತೆಯ ಮತ್ತು ಕುತೂಹಲದ ಭವ್ಯ ಮಿಶ್ರಣಗಳಾಗಿ, ಸಾಹಸಮಯ ಪ್ರಸಂಗಗಳಾದ ಯೊಜಿಂಬೊ, ಸಂಜೂರೋ, ಮತ್ತು ಆತ್ಮರಕ್ಷಕಗಳಲ್ಲಿ ಹೊರಹೊಮ್ಮಿದ್ದಾರೆ. ಈ ಮೂರೂ ಚಿತ್ರಗಳಿಗೆ ಪೀಠಿಕೆಯೆಂಬಂತೆ ಮೂಡಿಬಂದಿರುವದು, ಏಳು ಸಮುರಾಯಿಗಳು. ಇದು ಐತಿಹಾಸಿಕ, ಜಾನಪದ ಕತೆ ಹೇಳುವಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಮಾನವರು ತಮ್ಮ ಸಹಜ ನಡುವಳಿಕೆಯ ಹೊರತಾಗಿ, ಪ್ರಚೋದನೆಯ ಅಡಿಯಲ್ಲಿ ನಾವು ಗುರುತಿಸಲೇ ಸಾಧ್ಯವಾಗದಂತವರಾಗಿ ಕಾಣಬರುತ್ತಾರೆ. ಮಾನವರ ಈ ಅಸ್ತಿತ್ವದ ಬಗ್ಗೆ ನಮ್ಮ ಅರಿವಿಕೆಯನ್ನು ಹೆಚ್ಚಿಸುವ ಚಿತ್ರಗಳೆಂದರೆ, ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ. ಇಕುರು, ಪಾಶ್ಚಿಮಾತ್ಯ ಸಾಹಿತ್ಯ ಮತ್ತು ನಾಟಕಗಳಿಂದ ಪ್ರಭಾವಿತವಾದದ್ದು. ಅನೇಕ ಕಾರಣಗಳಿಂದ ಈ ಚಿತ್ರ ನನಗೆ ದೂರವಾಗೇ ಉಳಿಯಿತು. ಮಾದದೆಯೋ ಕುರೋಸಾವಾರ ಅರಳು-ಮರಳು ಎಂಬಂತಿದೆ.ಕುರೊಸಾವರ ನೈಪುಣ್ಯತೆ ಚಲನ ಚಿತ್ರ ಮಾಧ್ಯಮದ ಎಲ್ಲ ಅಂಶಗಳನ್ನೂ ಒಳಗೊಂದಿದೆ. ತಾಂತ್ರಿಕತೆ, ಕಥೆಯ ನಿರೂಪಣೆ ಮತ್ತು ಪಾತ್ರ ಸೄಷ್ಟಿ. ವೈಯಕ್ತಿಕವಾಗಿ ನನ್ನನ್ನು ಆಕರ್ಷಿಸುವದು ನಿರೂಪಣ ಕೌಶಲ್ಯ ಮತ್ತು ಪಾತ್ರ ಸೃಷ್ಟಿ. ಅವರ ಮೆಚ್ಚುಗೆಯ ಸಂಜೂರೊ ನಮಗೂ ಚಿರಪರಿಚಿತನಾದರೆ ಆಶ್ಚರ್ಯವೇನಿಲ್ಲ. ಇದರಲ್ಲಿ ಅವರ ನಟರ ತಂಡದ ಯೋಗದಾನ ಅಷ್ಟೇ ಮಹತ್ವದ್ದು. ಹಾಗೆಂದು, ಅವರ ತಾಂತ್ರಿಕತೆಯ ಬಗ್ಗೆ ನಾವು ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ. Dedicated to the memory of Kurosava ಎಂದು ಮಾಡಿರುವ ಚಿತ್ರಗಳನ್ನು ನೋಡಿದರೆ, ಇವರು ಕುರೋಸಾವಾನಿಂದ ಒಂದಿನಿತಾದರೂ ಪ್ರಭಾವಿತರಾಗಿದ್ದರೇ ಎಂಬ ಪ್ರಶ್ನೆಯೇಳುತ್ತದೆ (ಪ್ರಮುಖವಾಗಿ ಹಿಂದಿಯ "ಚೈನಾ ಗೇಟ್" ಎಂಬ ಚಿತ್ರವನ್ನು ಗಮನಿಸಿ..ಬೇಕಾದಷ್ಟು ಇಂಗ್ಲಿಷ್ ಚಿತ್ರಗಳೂ ಇವೆ). ನಂತರ ಹೊಳೆಯುವದೇನೆಂದರೆ ಈ ನಿರ್ದೇಶಕರುಗಳು ಕುರೋಸಾವರ ತಾಂತ್ರಿಕತೆಯಿಂದ ಮಾತ್ರ ಪ್ರಭಾವಿತರಾಗಿದ್ದಾರೆ ಎಂಬುದು.

Wednesday, December 12, 2012

ಗೋವಾ ಚಿತ್ರೋತ್ಸವ ಹಿನ್ನೆಲೆ : ಬೆಂಗಳೂರು ಚಿತ್ರೋತ್ಸವಕ್ಕೆ ಕೆಲವು ಟಿಪ್ಪಣಿ


ಗೋವಾ ಚಲನಚಿತ್ರೋತ್ಸವವನ್ನು ಹಿನ್ನೆಲೆಯಾಗಿಟ್ಟುಕೊಂಡು, ಡಿ. 20 ರಿಂದ  ಆರಂಭವಾಗುವ 5 ನೇ ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ ಕೆಲವು ನೋಟಗಳನ್ನು ಹರಿಸಿದ್ದಾರೆ ಅರವಿಂದ ನಾವಡರು. ಬೆಂಗಳೂರು ಮತ್ತೊಂದು ಚಿತ್ರೋತ್ಸವಕ್ಕೆ ಊರು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಒಳ್ಳೆಯ ಚರ್ಚೆಗೆ ಒಳಗು ಮಾಡಲೆಂದೇ ಈ ಲೇಖನವನ್ನು ಪ್ರಕಟಿಸಲಾಗುತ್ತಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ಬೆಂಗಳೂರು 5 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿರುವ ಹೊತ್ತಿದು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎರಡನೇ ಚಿತ್ರೋತ್ಸವ. ಈ ಮೊದಲ ಮೂರು ಚಿತ್ರೋತ್ಸವಗಳು ಸಂಘಟಿತವಾಗಿದ್ದು ಸಿನಿಮಾಸಕ್ತರೇ. ಸುಚಿತ್ರಾ ಫಿಲಂ ಸೊಸೈಟಿಯನ್ನು ಕೇಂದ್ರವಾಗಿಟ್ಟುಕೊಂಡು, ಒಂದಿಷ್ಟು ಚಿತ್ರೋತ್ಸಾಹಿಗಳು ಸೇರಿ ಸಂಘಟಿಸಿದ್ದರು.
ವಿವಿಧ ರೀತಿಯ ಹೊಸ ಪ್ರಯತ್ನಗಳಿಂದಹಿಡಿದು, ಬೆಂಗಳೂರಿನಲ್ಲಿ ಚಿತ್ರೋತ್ಸವದ ಸಂಭ್ರಮ ಶುರುವಾಗಿದ್ದೇ ಆಗ. ಈಗ ಐದರ ಸಂಭ್ರಮ. ಚಿತ್ರೋತ್ಸವ ವ್ಯವಸ್ಥೆಗೆ ಈಗ ಸರಕಾರಿ ರಕ್ಷಣೆ ದೊರೆತಿದೆ. ಇದು ಒಂದು ರೀತಿ ಸುಖ, ಮತ್ತೊಂದು ರೀತಿಯಲ್ಲಿ ದುಃಖ.
ಖ್ಯಾತ ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ಅವರನ್ನು ಸಂದರ್ಶಿಸುತ್ತಿರುವ ರತ್ನೋತ್ತಮ ಸೇನ್ ಗುಪ್ತ. (photo-A.Navada)
ಖ್ಯಾತ ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ಅವರನ್ನು ಸಂದರ್ಶಿಸುತ್ತಿರುವ ರತ್ನೋತ್ತಮ ಸೇನ್ ಗುಪ್ತ. (photo-A.Navada)









ಈ ಎರಡನ್ನೂ (ಸುಖ ಮತ್ತು ದುಃಖ) ಕಳೆದ ಬಾರಿ ನಾಲ್ಕನೇ ಚಿತ್ರೋತ್ಸವದಲ್ಲಿ ಅನುಭವಿಸಿದ್ದೇವೆ. ಹಾಗಾಗಿ, ಆ ದುಃಖವನ್ನು ಈ ಬಾರಿ ಕಡಿಮೆ ಮಾಡುವುದು ಹೇಗೆ ಎಂಬುದೆ ಮುಖ್ಯ ಚರ‍್ಚೆಯ ಸಂಗತಿಯಾಗಬೇಕೆಂಬುದು ನಮ್ಮ ಅಪೇಕ್ಷೆ.

Tuesday, December 11, 2012

ಚೆನೈ ಚಿತ್ರೋತ್ಸವಕ್ಕೆ ನಾಳೆ ಚಾಲನೆ


ಐಸಿಎಎಫ್ ಆಶ್ರಯದಲ್ಲಿ ನಡೆಯುವ ಚೆನ್ನೈ 10 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಾಳೆಯಿಂದ (ಡಿ.23) ಆರಂಭಗೊಳ್ಳಲಿದೆ.
ಡಿ. 20 ರವರೆಗೆ ನಡೆಯುವ ಉತ್ಸವದಲ್ಲಿ 160 ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಸುಮಾರು 45 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ.
header csif
ಟರ್ಕಿ, ಹಂಗೇರಿ ಮತ್ತು ಪೋಲ್ಯಾಂಡ್ ದೇಶದ ಪ್ರಮುಖ ಚಿತ್ರಗಳು "ಕಂಟ್ರಿ ಫೋಕಸ್" ವಿಭಾಗದಡಿ ಪ್ರದರ್ಶನಗೊಂಡರೆ, ಪುನರಾವಲೋಕನ (ರೆಟ್ರಾಸ್ಪೆಕ್ಟಿವ್) ವಿಭಾಗದಡಿ ತೈವಾನಿನ Hou Hsao-Hsien ಫಿನ್ ಲ್ಯಾಂಡಿನ Aki Karasmaki ಯವರ, ಫ್ರಾನ್ಸ್ ನ CLAUDE CHABRO ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ತಮಿಳು ಚಿತ್ರಗಳ ಸ್ಪರ್ಧೆಯಡಿ 12 ಚಿತ್ರಗಳು ಪ್ರದರ್ಶನಗೊಂಡರೆ, ಭಾರತೀಯ ಪನೋರಮಾದಡಿ ಎಂಟು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಪೈಕಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ "ಕೂರ್ಮಾವತಾರ"ವೂ ಒಂದು. ಇದಲ್ಲದೇ ವಿಶ್ವ ಸಿನಿಮಾ, ಭಾರತೀಯ ಸಿನಿಮಾ ನೂರು- ಮೈಲಿಗಲ್ಲಾದ ಸಿನಿಮಾಗಳು-ಹೀಗೆ ಹಲವು ವಿಭಾಗಗಳಿವೆ. ಇದರೊಂದಿಗೆ ವಿವಿಧ ವಿಚಾರ ಸಂಕಿರಣಗಳು, ಸಂವಾದಗಳನ್ನೂ ಆಯೋಜಿಸಲಾಗಿದೆ.
ವುಡ್ ಲ್ಯಾಂಡ್ಸ್, ವುಡಲ್ಯಾಂಡ್ಸ್ ಸಿಂಫೋನಿ, ಐನಾಕ್ಸ್, ಸತ್ಯಂ, ರಾಣಿ ಸೀತಾ ಹಾಲ್ ಮತ್ತು ಕ್ಯಾಸಿನೋದಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
amour
ಚಿತ್ರೋತ್ಸವದ ಆರಂಭದ ಚಿತ್ರವಾಗಿ ಮೈಕೆಲ್ ಹನಕೆ ಯವರ "ಲವ್" (ಅಮೋರ್) ಆಸ್ಟ್ರಿಯಾ ಚಿತ್ರ ಪ್ರದರ್ಶನಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ರಂಗನ್ನು ಹೆಚ್ಚಿಸಿದರೆ, ಸಮಾರೋಪ ಸಮಾರಂಭದಲ್ಲಿ ಹಿಂದಿಯ ಖ್ಯಾತ ನಟ ಅಮಿತಾಬ್ ಬಚ್ಚನ್ ಪಾಲ್ಗೊಳ್ಳುವರು. ಚಿತ್ರೋತ್ಸವಕ್ಕೆ ತಮಿಳುನಾಡು ಸರಕಾರ ಇದಕ್ಕಾಗಿ ವಿಶೇಷ ಅನುದಾನವನ್ನು ನೀಡಿದೆ.
ದೇಶ ವಿದೇಶದಿಂದ ಸುಮಾರು 20 ಕ್ಕೂ ಹೆಚ್ಚು ಮಂದಿ ಚಿತ್ರ ನಿರ್ದೇಶಕರು, ತಂತ್ರಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಿ ಹಿಂದು ಪತ್ರಿಕೆ ಪ್ರಾಯೋಜಿತ ಸಾಕ್ಷ್ಯಚಿತ್ರ ಸ್ಪರ್ಧೆಯೂ ನಡೆಯಲಿದೆ.
ವಿಶೇಷ ಪ್ರಶಸ್ತಿ
ಚೆನ್ನೈ ಚಿತ್ರೋತ್ಸವದಲ್ಲಿ ಬಹಳ ವಿಶೇಷವೆಂದರೆ, ಒಬ್ಬ ವಿಶೇಷ ಸಿನಿಮಾಸಕ್ತನನ್ನೂ ಪ್ರಶಸ್ತಿಗೆ ಆರಿಸಲಾಗುತ್ತದೆ. ಉತ್ಸವದಲ್ಲಿ ಅತಿ ಹೆಚ್ಚು ಸಿನಿಮಾ ನೋಡುವುದಲ್ಲದೇ, ತಾನು ನೋಡಿದ ಇತರೆ ಚಿತ್ರಗಳ ಬಗ್ಗೆ ನೂರು ಪದಗಳಿಗೆ ಮೀರದ ಒಂದು ಲೇಖನವನ್ನು ನೀಡಬೇಕು. ಇವೆಲ್ಲವನ್ನೂ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಇಂಡೋ ಸಿನಿ ಅಪ್ರಿಷಿಯೇಷನ್ ಫೌಂಡೇಷನ್ (ICEF) ನೋಂದಾಯಿತ ಫಿಲ್ಮ್ ಸೊಸೈಟಿ. 500 ಮಂದಿ ಸದಸ್ಯರನ್ನು ಹೊಂದಿರುವ ಇದು, 2003 ರಿಂದ ನಿರಂತರವಾಗಿ ಚಿತ್ರೋತ್ಸವಗಳನ್ನು ಸಂಘಟಿಸುತ್ತಿದೆ. ಚಿತ್ರೋತ್ಸವವಲ್ಲದೇ, ವರ್ಷ ಪೂರ್ತಿ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುತ್ತಾ ಬರುತ್ತಿದೆ.

Thursday, December 6, 2012

ಬೆಂಗಳೂರು ಚಿತ್ರೋತ್ಸವದಲ್ಲಿನ ಚಿತ್ರಗಳ ಸಂಪೂರ್ಣ ವಿವರ


ಬೆಂಗಳೂರಿನಲ್ಲಿ ಡಿಸೆಂಬರ್ 20 ರಿಂದ 27 ರವರೆಗೆ ನಡೆಯುವ ಐದನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳ ಸದ್ಯದ ಸಂಪೂರ್ಣ ವಿವರ ನೀಡಲಾಗಿದೆ.
ಈ ಪೈಕಿ ಚಿತ್ರ ಭಾರತಿ ಮತ್ತು ಕನ್ನಡ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿರುವ ಚಿತ್ರಗಳು, ನೂರನೇ ವರ್ಷದ ಭಾರತೀಯ ಸಿನಿಮಾದಡಿ ಪ್ರದರ್ಶಿತವಾಗಲಿರುವ ಚಿತ್ರಗಳ ವಿವರ  ಇನ್ನೂ ಪ್ರಕಟವಾಗಬೇಕಿದೆ.
MASTERS OF CINEMA (REVISITING CLASSICS)
 Akira Kurasawa
kurosawa
  1. Ikiru   (Akira Kurasawa/143/1952/Japan)
  2. I Live in Fear (Akira Kurasawa/103/1955/Japan)
  3. The Hidden Fortress (Akira Kurasawa/139/1958/Japan)
  4. Yojimbo (Akira Kurasawa/110/1961/Japan)
  5. Sanjuro (Akira Kurasawa/96/1962/Japan)
  6. Madadayo (Akira Kurasawa/134/1993/Japan)
  7. The Idiot (Akira Kurasawa/166/1951/Japan)
  8. Scandal (Akira Kurasawa/104/1950/Japan)
Henri Georges Clouzot
  1. Assassin habite au 21 (Henri Georges Clouzot/84/1942/France)
  2. L`Enfer (Inferno ) (Henri Georges Clouzot/120/1964/France)
  3. Les Diaboliques (Henri Georges Clouzot/114/1955/France)
  4. Quai des Orfèvres (Henri Georges Clouzot/106/1947/France)

Wednesday, November 21, 2012

ಭಾರತೀಯ ಪನೋರಮಾಕ್ಕೆ ಚಾಲನೆ


ಪಣಜಿ : ಗೋವೆಯ 43 ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ತೋಟದ ಸುಮಗಳು ಅರಳಿದವು.
ಐನಾಕ್ಸ್ ಮೂರನೇ ಚಿತ್ರಮಂದಿರದಲ್ಲಿ ಖ್ಯಾತ ನಟ ಓಂಪುರಿ, ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿದರು.
ಈ ವಿಭಾಗದಲ್ಲಿ ಹತ್ತುದಿನಗಳ ಕಾಲ ಕಥಾ ವಿಭಾಗದಲ್ಲಿ (ಫೀಚರ್) 20 ಮತ್ತು ಕಥೇತರ ವಿಭಾಗ (ನಾನ್ ಫೀಚರ್)ದಲ್ಲಿ 19 ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ (ನ್ಯಾಷನಲ್ ಫಿಲ್ಮ್ ಆರ್ಕೈವ್ಸ್)ನ ಚಾಲಕ ಶಕ್ತಿಯಾದ ಪಿ. ಕೆ. ನಾಯರ್ ಅವರ ಕುರಿತ ಸಾಕ್ಷ್ಯಚಿತ್ರ ಶಿವೇಂದ್ರ ಸಿಂಗ್ ದುಂಗರ್ ಪುರ್ ಅವರ ನಿರ್ದೇಶಿಸಿದ "ಸೆಲ್ಯುಲಾಯಿಡ್ ಮ್ಯಾನ್" ಚಿತ್ರದ ಮೂಲಕ ವೀಕ್ಷರಿಗೆ ತೆರೆದುಕೊಂಡಿತು.
ಕೂರ್ಮಾವತಾರ ಪ್ರದರ್ಶನ
ಭಾರತೀಯ ಪನೋರಮಾ ವಿಭಾಗ 1978 ರಲ್ಲಿ ಚಿತ್ರೋತ್ಸವಕ್ಕೆ ಸೇರ್ಪಡೆಗೊಂಡಿದ್ದು, ಈ ಬಾರಿ ಗಿರೀಶ್ ಕಾಸರವಳ್ಳಿಯವರ "ಕೂರ್ಮಾವತಾರ" ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೇ ಕಳೆದ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಮರಾಠಿಯ "ದೇವೂಳ್" ಮತ್ತು "ಬ್ಯಾರಿ" ಯಲ್ಲದೇ, ಜಾನು ಬರುವಾ ಅವರ 'ಬಂಧೋನ್' ಮತ್ತಿತರ 20 ಚಲನಚಿತ್ರಗಳು ತೆರೆ ಕಾಣುತ್ತಿವೆ.

ಕಲಾತ್ಮಕ ಚಿತ್ರಗಳನ್ನು ತಲುಪಿಸಲು ಪ್ರತ್ಯೇಕ ವ್ಯವಸ್ಥೆ ಅವಶ್ಯ : ಓಂಪುರಿ


ವರದಿ : ಅರವಿಂದ ನಾವಡ
ಪಣಜಿ : ಕಲಾತ್ಮಕ ಚಿತ್ರಗಳನ್ನು ಆಸಕ್ತ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸರಕಾರ ಕೈಗೊಳ್ಳಬೇಕು ಎಂದು ಹಿರಿಯ ನಟ ಓಂಪುರಿ ಆಗ್ರಹಿಸಿದ್ದಾರೆ.
ಗೋವೆಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಲಾತ್ಮಕ ಚಿತ್ರಗಳಿಗೆ ದೊರೆಯುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಆದರೆ, ಪ್ರತಿವರ್ಷ ಸ್ವತಂತ್ರ ಸಿನಿಮಾ ತಯಾರಕರು ರೂಪಿಸುವ ನೂರಾರು ಭಾರತೀಯ ಸಿನಿಮಾಗಳು ನೈಜ ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವು ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗುತ್ತಿವೆ' ಎಂದು ವಿಷಾದಿಸಿದರು.
"ಹೆಚ್ಚಿನ ಜನ ಸಮುದಾಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಪ್ರತ್ಯೇಕ ಚಾನೆಲ್ ನ್ನು ಆರಂಭಿಸುವ ಅಥವಾ ದೂರದರ್ಶನದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬೇಕು. ಸೃಜನಶೀಲಕೃತಿಗಳು ಸಂಬಂಧಪಟ್ಟ ಆಸಕ್ತ ಸಮುದಾಯಕ್ಕೆ ತಲುಪಿಸುವುದು ಈ ಹೊತ್ತಿನ ತುರ್ತು ಅಗತ್ಯದ ಕೆಲಸ' ಎಂದು ಹೇಳಿದರು.
"ಪ್ರಸ್ತುತ ಇರುವ ಚಲನಚಿತ್ರ ವಿತರಣಾ ವ್ಯವಸ್ಥೆಯನ್ನು ನಾನು ದೂರುತ್ತಿಲ್ಲ. ಅವರು ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡವರು. ಆದ್ದರಿಂದ, ಇಂಥ ಸ್ವತಂತ್ರ ಸಿನಿ ತಯಾರಕರು ರೂಪಿಸುವ ಸಿನಿಮಾಗಳನ್ನು ತಲುಪಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು' ಎಂದು ಹೇಳಿದರು.
ನೀತಿನಿರೂಪಕರು ನೋಡಲಿ
ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಸಮಸ್ಯೆಗಳನ್ನೇ ಪ್ರತಿಫಲಿಸುವ ರೀತಿಯಲ್ಲಿ ರೂಪಿತವಾಗುತ್ತಿದ್ದು, ನೀತಿ ನಿರೂಪಕರು ಇವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ಇತ್ತೀಚೆಗೆ "ಚಕ್ರವ್ಯೂಹ" ಸಿನಿಮಾದಲ್ಲಿ ನಟಿಸಿದೆ. ಅದು ನಕ್ಸಲ್ ಸಮಸ್ಯೆ ಕುರಿತಾದುದು. ಇಂದು ದೇಶದ ಹಲವೆಡೆ ಈ ಸಮಸ್ಯೆ ಉದ್ಭವಿಸಿದೆ. ಸಿನಿಮಾ ನಿರ್ಮಿಸುವವರು ಸಾಕಷ್ಟು ಅಧ್ಯಯನ ಕೈಗೊಂಡು ತೆರೆಯ ಮೇಲೆ ತಂದಿರುತ್ತಾರೆ. ಇಂಥ ಚಿತ್ರಗಳನ್ನು ವೀಕ್ಷಿಸಿದರೆ ಸಮಸ್ಯೆಯ ರೂಪ ಅರಿವಾದೀತು. ಸಮಸ್ಯೆಯ ನಿವಾರಣೆಗೆ ಪರಿಹಾರ ರೂಪಿಸಲು ನೆರವಾದೀತು' ಎಂದರು.
ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಉದಯಕುಮಾರ್ ವರ್ಮ, "12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಚಲನಚಿತ್ರ ಪರಂಪರೆಯನ್ನು ಬೆಳೆಸುವತ್ತ ಪೂರಕವಾಗುವಂತೆ 400 ಕೋಟಿ ರೂ. ಅಂದಾಜಿನ ರಾಷ್ಟ್ರೀಯ ಚಲನಚಿತ್ರ ಮಿಷನ್ ಪ್ರಾರಂಭಿಸಲಾಗುತ್ತಿದೆ. ಹಾಗೆಯೇ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರಸಾರಕ್ಕೂ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ಹಣದ ಸಹಾಯ ಒದಗಿಸುವುದು ಹಾಗೂ ಅವುಗಳ ಪ್ರಸಾರಕ್ಕೆ ದೂರದರ್ಶನದಲ್ಲಿ ಸೂಕ್ತ ಅವಕಾಶ ಕಲ್ಪಿಸಲು ಯೋಚಿಸಲಾಗುತ್ತಿದೆ.ಕಲಾತ್ಮಕ ಸಿನಿಮಾಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗವಿದ್ದರೆ ತಿಳಿಸಿ' ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಥಾ ಮತ್ತು ಕಥೇತರ ವಿಭಾಗದ ಜ್ಯೂರಿಗಳನ್ನು ಸನ್ಮಾನಿಸಲಾಯಿತು. ಶ್ಯಾಮ್ ಬೆನಗಲ್, ಪಿ. ಕೆ. ನಾಯರ್, ಬುದ್ಧದೇವ್ ದಾಸ್ ಗುಪ್ತ ಮತ್ತಿತರರು ಭಾಗವಹಿಸಿದ್ದರು.

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms